Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ದತ್ತುಪಡೆದ ಜಯಪುರ ಇಂದು ಆದರ್ಶ ಗ್ರಾಮ

ಪ್ರಧಾನಿ ಮೋದಿ ದತ್ತುಪಡೆದ ಜಯಪುರ ಇಂದು ಆದರ್ಶ ಗ್ರಾಮ
ವಾರಣಾಸಿ , ಮಂಗಳವಾರ, 30 ಜೂನ್ 2015 (18:48 IST)
ವಾರಣಾಸಿಯ ಜಯಪುರ ಗ್ರಾಮವನ್ನು ದತ್ತುಪಡೆದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಿದ್ದು ಎಲ್ಲಾ ಅಭಿವೃದ್ಧಿ ಕಾರ್ಯಗಳಉ ಬಹುತೇಕ ಮುಕ್ತಾಯಗೊಂಡಿವೆ ಎಂದು ಮೂಲಗಳಉ ತಿಳಿಸಿವೆ. 
 
ಆದರ್ಶ ಗ್ರಾಮದ ಸಂಭ್ರಮಾಚರಣೆಯನ್ನು ಆಚರಿಸಲು ನಿರ್ಧರಿಸಿದ್ದು, ಕೇಂದ್ರ ಆಹಾರ ಸಂಸ್ಕರಣ ಖಾತೆ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಇದೇ ಸಂದರ್ಭದಲ್ಲಿ ಸಚಿವೆ ಕೌರ್, ಮುಸಾಹರ್ ಸಮುದಾಯದ 14 ಕುಟುಂಬಗಳಿಗೆ ಅಟಲ್ ನಗರ್ ನಿವಾಸದಲ್ಲಿ ನಿರ್ಮಿಸಲಾದ ಮನೆಗಳನ್ನು ಹಸ್ತಾಂತರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಆದರ್ಶ ಗ್ರಾಮ ಆಚರಣೆಯ ಕಾರ್ಯಕ್ರಮದಲ್ಲಿ ಕೆಲ ಮಹತ್ವದ ಘೋಷಣೆಗಳನ್ನು ಕೂಡಾ ಸಚಿವೆ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
 
ಪ್ರಧಾವನಮಂತ್ರಿ ನರೇಂದ್ರ ಮೋದಿ ದತ್ತುಪಡೆದ ಕೇವಲ ಒಂದು ವರ್ಷದೊಳಗಾಗಿ ಎಲ್ಲಾ ರೀತಿಯ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಂಡಿರುವ ವರದಿಯನ್ನು ಪ್ರಧಾನಿ ಮೋದಿಗೆ ಕಳುಹಿಸಲು ತೀರ್ಮಾನಿಸಲಾಗಿದೆ. 
 

Share this Story:

Follow Webdunia kannada