Webdunia - Bharat's app for daily news and videos

Install App

ಶಶಿಕಲಾ ವಿರುದ್ಧ ತೊಡೆ ತಟ್ಟಿ ನಿಂತ ದೀಪಾ

Webdunia
ಮಂಗಳವಾರ, 17 ಜನವರಿ 2017 (13:50 IST)
ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ, ಎಂಜಿಆರ್ ಶತಮಾನೋತ್ವದ ದಿನವಾದ ಇಂದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಮರ ಆರಂಭವಾಗಿದೆ. ದಿವಂಗತ ಜೆ. ಜಯಲಲಿತಾ ಸಹೋದರ, ದಿ. ಜಯಕುಮಾರ್‌ ಪುತ್ರಿ, 42ರ ಹರೆಯದ ದೀಪಾ ಜಯಕುಮಾರ್‌ ಇಂದು ರಾಜಕೀಯ ರಂಗಪ್ರವೇಶ ಮಾಡಿದ್ದು, ಜಯಾ ಆಪ್ತೆ, ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ತೊಡೆ ತಟ್ಟಿದ್ದಾರೆ. 

 
ಮಾಜಿ ಸಿಎಂ, ಎಐಎಡಿಎಂಕೆ ಸ್ಥಾಪಕ ಎಂಜಿಆರ್ 100ನೇ ಜನ್ಮದಿನವಾದ ಇಂದು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ದೀಪಾ ಬಳಿಕ ಜಯಾ ಸಮಾಧಿಗೆ ತೆರಳಿ ನಮನ ಸಲ್ಲಿಸಿದರು. ಆ ಸಮಯದಲ್ಲಿ ಮರೀನಾ ಬೀಚ್‌ನಲ್ಲಿ ದೀಪಾ ಅವರ ಸಾವಿರಾರು ಅಭಿಮಾನಿಗಳು ಹಾಜರಿದ್ದರು. ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಜಯಾ ಸ್ಥಾನವನ್ನು ನಾನು ತುಂಬಬೇಕೆಂಬುದು ಬೆಂಬಲಿಗರ ಅಪೇಕ್ಷೆ.  ಬೆಂಬಲಿಗರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಬೇರೆಯವರು ಜಯಾ ಸ್ಥಾನವನ್ನು ಆಕ್ರಮಿಸಿಕೊಳ್ಳುವುದನ್ನು ನಾನು ಕೂಡ ಇಷ್ಟ ಪಡಲ್ಲ. ನನ್ನ ಬಗ್ಗೆ ಕೆಲವರು ಅಪ್ರಪಚಾರ ಮಾಡುತ್ತಿದ್ದಾರೆ. ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪರೋಕ್ಷವಾಗಿ ಶಶಿಕಲಾ ಅವರಿಗೆ ಟಾಂಗ್ ನೀಡಿದರು.
 
ನನ್ನೆದುರು ಎರಡು ಆಯ್ಕೆಗಳಿವೆ. ನನ್ನ ಅತ್ತೆ ಕನಸುಗಳನ್ನು ಸಾಕಾರಗೊಳಿಸಲು ನಾನು ರಾಜಕೀಯಕ್ಕೆ ಸೇರುತ್ತೇನೆ. ಒಂದೋ ಎಐಡಿಎಂಕೆ ಸೇರುತ್ತೇನೆ, ಇಲ್ಲ ನನ್ನದೇ ಆದ ಹೊಸ ಪಕ್ಷ ಕಟ್ಟುತ್ತೇನೆ. ಜಯಲಲಿತಾ ಜನ್ಮದಿನದಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಹೇಳುವುದರ ಮೂಲಕ ಕುತೂಹಲವನ್ನು ಕಾಯ್ದಿಟ್ಟಿದ್ದಾರೆ. 
 
ಜಯಾ ನಿಧನದ ಬಳಿಕ ಎಐಡಿಎಂಕೆ ಕಾರ್ಯಕರ್ತರು ಮತ್ತು ಕೆಲ ನಾಯಕರು ಪಕ್ಷ ಸೇರುವಂತೆ ದೀಪಾ ಅವರನ್ನು ಒತ್ತಾಯಿಸಿದ್ದರು. ಕೊನೆಗೂ ಅವರ ಆಗ್ರಹಕ್ಕೆ ಮಣಿದಿರುವ ದೀಪಾ ಇಂದು 11 ಗಂಟೆಗೆ ಪತ್ರಿಕಾಗೋಷ್ಠಿ  ನಡೆಸಿ ತಾವು ರಾಜಕೀಯಕ್ಕಿಳಿಯುತ್ತಿರುವುದನ್ನು ಸ್ಪಷ್ಟ ಪಡಿಸಿದ್ದಾರೆ. 
 
ವಿ ಕೆ ಶಶಿಕಲಾ ಅವರು ಅಮ್ಮನ ಉತ್ತರಾಧಿಕಾರಿಯಾಗುವುದರ ವಿರುದ್ಧ ಹೋರಾಡುವುದು ದೀಪಾ ಅವರ ಉದ್ದೇಶ ಎಂಬುದು ಸ್ಪಷ್ಟ. ಅವರು ಲಂಡನ್‌ನಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿದ್ದಾರೆ. 
 
 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments