Webdunia - Bharat's app for daily news and videos

Install App

ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಮರಳಿ ಮಣ್ಣು ಸೇರಿದ ‘ಅಮ್ಮ’

Webdunia
ಮಂಗಳವಾರ, 6 ಡಿಸೆಂಬರ್ 2016 (18:09 IST)
ಚೆನ್ನೈ: ಲಕ್ಷಾಂತರ ಅಭಿಮಾನಿಗಳು. ಅಮ್ಮಾ ಮರಳಿ ಬಾ ಎನ್ನುವ ಕೂಗಿನೊಂದಿಗೆ ತಮಿಳುನಾಡಿನ ಜನಪ್ರಿಯ ಮುಖ್ಯಮಂತ್ರಿ ಜಯಲಲಿತಾ ಮಣ್ಣಲ್ಲಿ ಮಣ್ಣಾದರು. ಮರೀನಾ ಬೀಚ್ ನಲ್ಲಿ ಅವರ ಗುರು ಎಂಜಿಆರ್ ಸಮಾಧಿಯ ಪಕ್ಕವೇ ಅವರ ಅಂತ್ಯಕ್ರಿಯೆ ನೆರವೇರಿತು.

ಇದಕ್ಕೂ ಮೊದಲು ರಾಜಾಜಿ ಹಾಲ್ ನಿಂದ ಅಂತ್ಯಕ್ರಿಯೆ ನಡೆಯುವ ಸ್ಥಳದವರೆಗೆ, ಅಂತಿಮ ಯಾತ್ರೆ ನಡೆಯಿತು. ಈ ವೇಳೆ ಲಕ್ಷಾಂತರ ಜನರು ಅಮ್ಮನಿಗೆ ಅಂತಿಮ ವಿದಾಯ ಹೇಳಿದರು. ಈ ವೇಳೆ ರಸ್ತೆಯ ಇಕ್ಕೆಲೆಗಳಲ್ಲಿ ಜನ ಸ್ತೋಮ ನೆರೆದಿತ್ತು. ಪುಷ್ಪಾಲಂಕಾರ ಮಿಲಿಟರಿ ಟ್ರಕ್ ನಲ್ಲಿ ಜಯಲಲಿತಾ ಅಂತಿಮ ಯಾತ್ರೆ ನೆರವೇರಿತು.

ರಾಜ್ಯಪಾಲ ವಿದ್ಯಾ ಸಾಗರ್, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಲಾಂ ನಬಿ ಅಜಾದ್, ನೂತನ ಮುಖ್ಯಮಂತ್ರಿ ಪನೀರ್ ಸೆಲ್ವಂ, ಎಐಎಡಿಎಂಕೆ ಪಕ್ಷದ ನಾಯಕರು, ಅಂತಿಮ ನಮನ ಸಲ್ಲಿಸಿದರು. ಮೂರು ಸುತ್ತು ಕುಶಾಲು ತೋಪು ಸಿಡಿಸಿ ಅಗಲಿದ ನಾಯಕಿಗೆ ಗೌರವ ಸಲ್ಲಿಸಲಾಯಿತು.

ವೈಷ್ಣವ ಸಂಪ್ರದಾಯದಂತೆ ಜಯಲಲಿತಾ ಅಂತಿಮ ವಿಧಿ ವಿಧಾನಗಳನ್ನು ಜಯಲಲಿತಾ ಆತ್ಮೀಯ ಸ್ನೇಹಿತೆ ಶಶಿಕಲಾ ಪೂರೈಸಿದರು. ಈ ವೇಳೆ ಅಭಿಮಾನಿಗಳ ಅಮ್ಮಾ ಎನ್ನುವ ಕೂಗು ಮುಗಿಲು ಮುಟ್ಟಿತ್ತು. ಅಭಿಮಾನಿಗಳ ಸಮ್ಮುಖದಲ್ಲಿ ಜಯಲಲಿತಾರ ಪಾರ್ಥಿವ ಶರೀರವನ್ನು ಸಕಲ ಗೌರವಗಳೊಂದಿಗೆ ಸಮಾಧಿ ಸ್ಥಳದಲ್ಲಿ ಇಡಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಹನಕ್ಕೆ ಸಿಲುಕಿ ಬೆಂಬಲಿಗ ಸಾವು: ಜಗನ್ ಮೋಗನ್‌ ರೆಡ್ಡಿಗೆ ಆಂಧ್ರದಿಂಧ ಬಿಗ್‌ ರಿಲೀಫ್‌

1941ರ ಬಳಿಕ ಕೆಆರ್‌ಎಸ್‌ ಡ್ಯಾಂನಲ್ಲಿ ಮೊದಲ ಬಾರಿ 124 ಅಡಿ ತಲುಪಿದ ನೀರಿನ ಮಟ್ಟ

ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ: ಆರ್‌ ಅಶೋಕ್‌

ಜಗನ್ನಾಥ ರಥಯಾತ್ರೆ ವೇಳೆ ರೊಚ್ಚಿಗೆದ್ದು ದಿಕ್ಕಾಪಾಲಾಗಿ ಓಡಿದ ಆನೆ: ಇಬ್ಬರು ಭಕ್ತರಿಗೆ ಗಾಯ

ಕೋರ್ಟಿನ ತಡೆಯಾಜ್ಞೆ ನಡುವೆ ದಲಿತರ ಭೂಮಿ ತೆರವಿಗೆ ಯತ್ನ: ಛಲವಾದಿ ನಾರಾಯಣಸ್ವಾಮಿ

ಮುಂದಿನ ಸುದ್ದಿ
Show comments