Webdunia - Bharat's app for daily news and videos

Install App

ಜಮ್ಮು ಸರಕಾರ ರಚನೆ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾರಿಂದ ಬಿಜೆಪಿಯೊಂದಿಗಿನ ಮೈತ್ರಿ ಅಂತ್ಯಕ್ಕೆ ಸಂಕೇತ

Webdunia
ಶುಕ್ರವಾರ, 5 ಫೆಬ್ರವರಿ 2016 (21:11 IST)
ಕಳೆದ ಕೆಲ ದಿನಗಳಿಂದ ನೆನೆಗುದಿಯಲ್ಲಿರುವ ಸರಕಾರ ರಚನೆ ಕುರಿತಂತೆ ಕೇಂದ್ರ ಸರಕಾರ ಆತ್ಮವಿಶ್ವಾಸ ಹೆಚ್ಚಿಸುವಂತಹ ನೀತಿಗಳನ್ನು ಘೋಷಿಸದಿದ್ದಲ್ಲಿ ಮೈತ್ರಿಯನ್ನು ಅಂತ್ಯಗೊಳಿಸುವುದಾಗಿ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದ್ದಾರೆ.
 
ಜಮ್ಮುವಿನಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಮುಫ್ತಿ, ಹೊಸ ಸರಕಾರ ರಚನೆಗೆ ಮುನ್ನ ಹೊಸ ವಾತಾವರಣ ಸೃಷ್ಟಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ., ನಮ್ಮ ಉದ್ದೇಶವನ್ನು ಬ್ಲಾಕ್‌ಮೇಲ್ ಎಂದು ಪರಿಗಣಿಸಬಾರದು ಎಂದು ಕೋರಿದರು.
 
ಗಾಳಿಯಲ್ಲಿ ಸರಕಾರ ರಚನೆ ಮಾಡಲು ಸಾಧ್ಯವಾಗದು. ಒಂದು ವೇಳೆ, ಹೊಸ ಸರಕಾರ ರಚನೆಯಾದಲ್ಲಿ ಜನತೆಯ ಏಳಿಗೆಗಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಅದಕ್ಕೆ ಕೇಂದ್ರ ಸರಕಾರದ ಸಹಕಾರ ಅಗತ್ಯವಾಗುತ್ತದೆ. ಆದರೆ, ಒಂದು ವೇಳೆ ಕೇಂದ್ರ ಸರಕಾರ ಸಹಕಾರ ನೀಡಿದಲ್ಲಿ ಉತ್ತಮವಾಗಿರುತ್ತದೆ. ನೀಡದಿದ್ದಲ್ಲಿ ಮತ್ತೆ ಹಿಂದಿನ ಕಾಲಕ್ಕೆ ಮರಳಬೇಕಾಗುತ್ತದೆ ಎಂದರು.   
 
ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಜನೆವರಿ 7ರಂದು ನಿಧನಗೊಂಡ ನಂತರ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆಯ ವಾತಾವರಣದಿಂದಾಗಿ ರಾಷ್ಟ್ರಪತಿ ಅಡಳಿತ ಹೇರಲಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments