Webdunia - Bharat's app for daily news and videos

Install App

ನಮ್ಮ ಕ್ಯಾಂಟೀನ್ ಆಹಾರ ಎಲ್ಲಿಂದ ಬರುತ್ತೆ ಗೊತ್ತಾ..?

Webdunia
ಗುರುವಾರ, 16 ಮಾರ್ಚ್ 2017 (11:43 IST)
ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್`ನಲ್ಲಿ ಜನಪ್ರಿಯ ನಮ್ಮ ಕ್ಯಾಂಟೀನ್ ಯೋಜನೆ ಘೋಷಿಸಿದ್ದಾರೆ. ಬೆಂಗಳೂರಿನ 198 ವಾರ್ಡ್`ಗಳಲ್ಲಿ 10 ರೂಪಾಯಿಗೆ ಊಟ, 5 ರೂಪಾಯಿಗೆ ತಿಂಡಿ ಕೊಡುವ ಈ ಯೋಜನೆ  ಜನಮೆಚ್ಚುಗೆಗೆ ಪಾತ್ರವಾಗಿದೆ.

ಅಂದಹಾಗೆ, ನಮ್ಮ ಕ್ಯಾಂಟೀನ್ ಊಟ ಸರಬರಾಜಾಗುವುದು ಇಸ್ಕಾನ್ ಸಂಸ್ಥೆಯಿಂದ. ಈ ಬಗ್ಗೆ ಇಸ್ಕಾನ್ ಜೊತೆ ಒಂದು
ಸುತ್ತಿನ ಮಾತುಕತೆ ನಡೆಸಿರುವ ಸರ್ಕಾರ ಅಕ್ಷಯ ಪಾತ್ರೆ ಯೋಜನೆಯಡಿ ನಮ್ಮ ಕ್ಯಾಂಟೀನ್`ಗೂ ಊಟದ ಸಪ್ಲೈ ಮಾಡಲಿದೆ.
ಮಧ್ಯಾಹ್ನದ ಬಿಸಿಯೂಟದಲ್ಲಿ ಇಸ್ಕಾನ್ ಉತ್ಕೃಷ್ಟ ಆಹಾರ ನೀಡುತ್ತಿದೆ. ಹೀಗಾಗಿಯೇ, ಇದೇ ಉತ್ತಮ ಕ್ವಾಲಿಟಿಯ ಆಹಾರವನ್ನೂ ನಮ್ಮ ಕ್ಯಾಂಟಿನ್`ಗಳಲ್ಲಿ ಒದಗಿಸುವುದು ಸರ್ಕಾರದ ಉದ್ದೇಶ. ಬಿಬಿಎಂಪಿ ನೆರವಿನ ಮೂಲಕ ಜಾಗ ಪಡೆದು ನಮ್ಮ ಕ್ಯಾಂಟಿನ್ ತೆರೆದು ಇಸ್ಕಾನ್ ಸಂಸ್ಥೆಯಿಂದ ಬರುವ ಊಟವನ್ನ ಇಲ್ಲಿ ನೀಡಲಾಗುತ್ತದೆ.

ಪ್ರತಿನಿತ್ಯ 1 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು, ಒಂದು ತಿಂಗಳೊಳಗೆ ಯೊಜನೆ ಜಾರಿಗೆ ಬರಲಿದೆ.ಇಸ್ಕಾನ್`ಗೆ ಪ್ರತಿ ಊಟಕ್ಕೆ 20 ರೂ. ವನ್ನ ಸರ್ಕಾರ ನೀಡಲಿದೆ.

 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments