Webdunia - Bharat's app for daily news and videos

Install App

ಏಕಾಂಗಿಯಾಗುತ್ತಾರಾ ಪನ್ನೀರ್ ಸೆಲ್ವಂ?

Webdunia
ಶುಕ್ರವಾರ, 17 ಫೆಬ್ರವರಿ 2017 (09:39 IST)
ಮುಖ್ಯಮಂತ್ರಿಯಾಗಿ ಪಳನಿಸ್ವಾಮಿ ಆಯ್ಕೆ ಬಹುತೇಕ ಶಾಸಕರ ಭಿನ್ನಮತವನ್ನು ಶಮನಗೊಳಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಮತ್ತೀಗ ಪನ್ನೀರ್ ಒಂಟಿಯಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಜಯಾ ಮತ್ತು ಶಶಿಕಲಾ ಇಬ್ಬರಿಗೂ ನಿಷ್ಠರಾಗಿದ್ದ ಪಳನಿ ಸ್ವಾಮಿಯವನ್ನು ಮುಖ್ಯಮಂತ್ರಿಯಾಗಿಸಲು ಜಯಾ ಆಸ್ಪತ್ರೆ ಸೇರಿದಾಗಲೇ ನಿರ್ಧರಿಸಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಪನೀರ್ ಸೆಲ್ವಂ ಸಿಎಂ ಗಾದಿಗೇರಿದ್ದರು, 
 
ಪಕ್ಷದ ಮತಬ್ಯಾಂಕ್ ಆಗಿರುವ ತೇವರ್-ಗೌಂಡರ್ ಸಮುದಾಯದ ನಡುವಿನ ಕೊಂಡಿಯಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಪಳನಿಸ್ವಾಮಿ ಅವರ ಬಗ್ಗೆ ಪಕ್ಷದಲ್ಲಿ ಉತ್ತಮ ಬೆಂಬಲವಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ  ಸೆಲ್ವಂ ಹೊರತು ಪಡಿಸಿ ಅವರ ಜತೆಗಿದ್ದವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಸಂಧಾನ ಕಾರ್ಯ ಆರಂಭಿಸಿದ್ದಾರೆ. ನಾಳೆ ಬಹುಮತ ಪಡಿಸಲು ವಿಫಲವಾದರೆ ಪಳನಿ ಸರ್ಕಾರ ಅಸ್ತಿತ್ವಕ್ಕೆ ಬಂದ ಎರಡೇ ದಿನಗಳಲ್ಲಿ ಪತನವಾಗಲಿದೆ.
 
ನಾಳೆ ಪಳನಿಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕಿದ್ದು ತುರ್ತಾಗಿ 11 ಶಾಸಕರ ಬೆಂಬಲ ಸಿಕ್ಕರೆ ಸ್ಥಿರ ಸರ್ಕಾರ ರಚನೆ ಸುಲಭವಾಗುತ್ತದೆ.ಈ ರಾಜಿ ಸಂಧಾನ ಯಶ ಕಂಡರೆ ಪನ್ನೀರ್ ಸೆಲ್ವಂ ಏಕಾಗಿಯಾಗಲಿದ್ದಾರೆ. ರಾಜಿ ಸಂಧಾನ ವಿಫಲವಾದರೆ ಪನ್ನಿರ್ ಸೆಲ್ವಂಗೆ ಅಧಿಕಾರ ರಚಿಸುವ ಅವಕಾಶ ದೊರೆಯಬಹುದು.
 
 
ಈಗಾಗಲೇ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿತವಾಗಿರುವ ಸೆಲ್ವಂ ಬಣ ಮತ್ತೀಗ ಸೆಲ್ವಂ ಮತ್ತು ಅವರ ಬೆಂಬಲಿಗರ ನಡೆ ಕುತೂಹಲವನ್ನು ಕೆರಳಿಸಿದೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments