Select Your Language

Notifications

webdunia
webdunia
webdunia
webdunia

ಶೀನಾ ಹತ್ಯೆ: ಕೊನೆಗೂ ಸತ್ಯ ಒಪ್ಪಿಕೊಂಡಳಾ ಇಂದ್ರಾಣಿ ?

ಶೀನಾ ಹತ್ಯೆ: ಕೊನೆಗೂ ಸತ್ಯ ಒಪ್ಪಿಕೊಂಡಳಾ ಇಂದ್ರಾಣಿ ?
ಮುಂಬೈ , ಬುಧವಾರ, 2 ಸೆಪ್ಟಂಬರ್ 2015 (12:12 IST)
ಬಂಧನವಾಗಿದ್ದಾಗಿನಿಂದ ತಪ್ಪನ್ನು ಒಪ್ಪಿಕೊಳ್ಳದೇ ಶೀನಾ ಅಮೇರಿಕದಲ್ಲಿದ್ದಾಳೆ, ಆಕೆ ಸತ್ತಿಲ್ಲ ಎಂದು ವಾದಿಸುತ್ತಲೇ ಬಂದಿದ್ದ ಇಂದ್ರಾಣಿ ಹತ್ಯೆಯಲ್ಲಿ ತನ್ನ ಪಾತ್ರವಿರುವುದನ್ನು ಕೊನೆಗೂ ಒಪ್ಪಿಕೊಂಡಿದ್ದಾಳೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ. ಪ್ರಕರಣದ ಇತರ ಇಬ್ಬರು ಆರೋಪಿಗಳು ಈಗಾಗಲೇ ತಪ್ಪೊಪ್ಪಿಕೊಂಡಿರುವುದರಿಂದ ಬೇರೆ ದಾರಿ ಕಾಣದೇ ಇಂದ್ರಾಣಿ ಮಗಳ ಕೊಲೆಗೈದಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. 

ತನ್ನ ವಕೀಲರನ್ನು ಭೇಟಿಯಾದ ಬಳಿಕ ಇಂದ್ರಾಣಿ ಕೊಲೆ ಪ್ರಕರಣದಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡಿದ್ದಾಳೆ. ಆದರೆ ಕೊಲೆಯ ಹಿಂದಿನ ಉದ್ದೇಶವನ್ನು ಆಕೆ ಬಾಯ್ಬಿಟ್ಟಿಲ್ಲ. ಜತೆಗೆ ಪುತ್ರ ಮಿಖೈಲ್ ಬೋರಾನನ್ನು ಕೊಲ್ಲಲು ಸಹ ಸಂಚು ರೂಪಿತವಾಗಿತ್ತು ಎಂಬ ಆರೋಪವನ್ನು ಸಹ ಆಕೆ ನಿರಾಕರಿಸಿದ್ದಾಳೆ. 
 
ಪೊಲೀಸರು ಮೆಟ್ರೋ ಪಾಲಿಟಿನ್ ಮ್ಯಾಜಿಸ್ಟ್ರೇಟ್ ಎದುರು ಕರೆತರುವ ಮುನ್ನ ಇಂದ್ರಾಣಿ ಬಾಂದ್ರಾ ಕೋರ್ಟ್‌ನಲ್ಲಿ ತನ್ನ ಇನ್ನೊಬ್ಬ ಮಗಳಾದ ವಿಧಿಯನ್ನು ಭೇಟಿಯಾದಳು. ಇತರ ಇಬ್ಬರು ಆರೋಪಿಗಳಾದ ಇಂದ್ರಾಣಿ ಮಾಜಿ ಪತಿ ಸಂಜೀವ್ ಕುಮಾರ್ ಮತ್ತು ಮಾಜಿ ಕಾರು ಚಾಲಕ ಶ್ಯಾಮವರ್ ರೈ ಅವರನ್ನು ಸಹ ಕೋರ್ಟ್ ಮುಂದೆ ಪ್ರಸ್ತುತ ಪಡಿಸಲಾಗಿದೆ. 
 
ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಶವವನ್ನು ಸಾಗಿಸಲು ಬಳಸಿದ ಇಂದ್ರಾಣಿಯ ಸದ್ಯದ ಪತಿ ಪೀಟರ್ ಮುಖರ್ಜಿಗೆ ಸೇರಿದ್ದಾಗಿದೆ. ಆದರೆ ಈ ಕುರಿತು ಪೊಲೀಸರು ಇನ್ನೂ ಖಚಿತಪಡಿಸಿಲ್ಲ. 

Share this Story:

Follow Webdunia kannada