ಭಾರತೀಯ ಸೇನಾಪಡೆಗಳು ಪಾಕಿಸ್ತಾನ ಮೂಲದ ಮತ್ತೊರ್ವ ಉಗ್ರ ಸಜ್ಜಾದ್ ಅಹ್ಮದ್ನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ.
ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ್ದ ಸೇನಾಪಡೆ, ಮೂವರು ಉಗ್ರರನ್ನು ಹತ್ಯೆಗೈದು ಓರ್ವ ಉಗ್ರ ಜೀವಂತ ಸೆರೆಹಿಡಿದಿದೆ.
ಜಮ್ಮು ಕಾಶ್ಮಿರದ ರಫಿಯಾಬಾದ್ನಲ್ಲಿ ಉಗ್ರರು ಅವಿತಿದ್ದಾರೆ ಎನ್ನುವ ಮಾಹಿತಿ ಪಡೆದ ಸೇನಾಪಡೆ, ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿತು.
ಉಧಮ್ಪುರ್ ಏನ್ಕೌಂಟರ್ ವೇಳೆ ಜೀವಂತವಾಗಿ ಸೆರೆ ಸಿಕ್ಕಿದ್ದ ನಾವೇದ್ ನಂತರ ಇದೀಗ ಸಜ್ಜಾದ್ ಅಹ್ಮದ್ ಕೂಡಾ ಜೀವಂತವಾಗಿ ಸೆರೆಸಿಕ್ಕಿದ್ದು ಪಾಕ್ ಷಢ್ಯಂತ್ರ ಬಯಲಿಗೆ ಬಂದಂತಾಗಿದೆ.