Webdunia - Bharat's app for daily news and videos

Install App

2020ರ ವೇಳೆಗೆ ಭಾರತ ಸಂಪೂರ್ಣ ಹಿಂದು ರಾಷ್ಟ್ರವಾಗಲಿದೆ: ಅಶೋಕ್ ಸಿಂಘಾಲ್

Webdunia
ಶನಿವಾರ, 18 ಜುಲೈ 2015 (19:05 IST)
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಗೆಲುವು ಹೊಸತೊಂದು ಕ್ರಾಂತಿಯನ್ನು ತಂದಿದೆ. ಮುಂಬರುವ 2020ರವೇಳೆಗೆ ಭಾರತ ಸಂಪೂರ್ಣ ಹಿಂದು ರಾಷ್ಟ್ರವಾಗಲಿದೆ ಎಂದು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್  ಹೇಳಿದ್ದಾರೆ.
 
ನಾನು ಸಾಯಿಬಾಬಾ ಆಶ್ರಮದಲ್ಲಿದ್ದೆ. ಮುಂಬರುವ 2020ರ ವೇಳೆಗೆ ಭಾರತ ಹಿಂದು ರಾಷ್ಟ್ರವಾಗಲಿದೆ. 2030ರ ವೇಳೆಗೆ ವಿಶ್ವವೇ ಹಿಂದುವಾಗಲಿದೆ. ನನ್ನ ಪ್ರಕಾರ ಈಗಾಗಲೇ ಈ ಕ್ರಾಂತಿ ಆರಂಭವಾಗಿದೆ ಎಂದರು.
 
ಕಳೆದ ಲೋಕಸಭೆ ಚುನಾವಣೆಯ ಗೆಲುವು 800 ವರ್ಷಗಳ ಗುಲಾಮಗಿರಿಗೆ ಅಂತ್ಯ ತಂದಿದೆ. ವಿಶ್ವದ ಮುಂದೆ ಭಾರತ ಹೊಸತೊಂದು ಸಿದ್ಧಾಂತವನ್ನು ಮಂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಕಳೆದ ವರ್ಷ ದಿವಂಗತರಾದ ಆರೆಸ್ಸೆಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಅವರ ಜೀವನ ಮತ್ತು ಕಾರ್ಯ ಎನ್ನುವ ಪುಸ್ತಕವನ್ನು  ಸಿಂಘಾಲ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಉಪಸ್ಥಿತರಿದ್ದರು. 
 
ವಿಶ್ವ ಹಿಂದು ಪರಿಷತ್ ಮತ್ತು ಬಿಜೆಪಿ ಪಕ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾರ್ಗದರ್ಶಿಯಂತೆ ಕಾರ್ಯನಿರ್ವಹಿಸುತ್ತದೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments