Select Your Language

Notifications

webdunia
webdunia
webdunia
webdunia

2020ರ ವೇಳೆಗೆ ಭಾರತ ಸಂಪೂರ್ಣ ಹಿಂದು ರಾಷ್ಟ್ರವಾಗಲಿದೆ: ಅಶೋಕ್ ಸಿಂಘಾಲ್

2020ರ ವೇಳೆಗೆ ಭಾರತ ಸಂಪೂರ್ಣ ಹಿಂದು ರಾಷ್ಟ್ರವಾಗಲಿದೆ: ಅಶೋಕ್ ಸಿಂಘಾಲ್
ನವದೆಹಲಿ , ಶನಿವಾರ, 18 ಜುಲೈ 2015 (19:05 IST)
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಗೆಲುವು ಹೊಸತೊಂದು ಕ್ರಾಂತಿಯನ್ನು ತಂದಿದೆ. ಮುಂಬರುವ 2020ರವೇಳೆಗೆ ಭಾರತ ಸಂಪೂರ್ಣ ಹಿಂದು ರಾಷ್ಟ್ರವಾಗಲಿದೆ ಎಂದು ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಾಲ್  ಹೇಳಿದ್ದಾರೆ.
 
ನಾನು ಸಾಯಿಬಾಬಾ ಆಶ್ರಮದಲ್ಲಿದ್ದೆ. ಮುಂಬರುವ 2020ರ ವೇಳೆಗೆ ಭಾರತ ಹಿಂದು ರಾಷ್ಟ್ರವಾಗಲಿದೆ. 2030ರ ವೇಳೆಗೆ ವಿಶ್ವವೇ ಹಿಂದುವಾಗಲಿದೆ. ನನ್ನ ಪ್ರಕಾರ ಈಗಾಗಲೇ ಈ ಕ್ರಾಂತಿ ಆರಂಭವಾಗಿದೆ ಎಂದರು.
 
ಕಳೆದ ಲೋಕಸಭೆ ಚುನಾವಣೆಯ ಗೆಲುವು 800 ವರ್ಷಗಳ ಗುಲಾಮಗಿರಿಗೆ ಅಂತ್ಯ ತಂದಿದೆ. ವಿಶ್ವದ ಮುಂದೆ ಭಾರತ ಹೊಸತೊಂದು ಸಿದ್ಧಾಂತವನ್ನು ಮಂಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 
 
ಕಳೆದ ವರ್ಷ ದಿವಂಗತರಾದ ಆರೆಸ್ಸೆಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಅವರ ಜೀವನ ಮತ್ತು ಕಾರ್ಯ ಎನ್ನುವ ಪುಸ್ತಕವನ್ನು  ಸಿಂಘಾಲ್ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಉಪಸ್ಥಿತರಿದ್ದರು. 
 
ವಿಶ್ವ ಹಿಂದು ಪರಿಷತ್ ಮತ್ತು ಬಿಜೆಪಿ ಪಕ್ಷಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಾರ್ಗದರ್ಶಿಯಂತೆ ಕಾರ್ಯನಿರ್ವಹಿಸುತ್ತದೆ.
 

Share this Story:

Follow Webdunia kannada