ಒಂದು ವೇಳೆ, ಬಿಜೆಪಿಗೆ ಕಾಂಗ್ರೆಸ್ ಮುಕ್ತ ಭಾರತ ಅಗತ್ಯವಾಗಿದ್ದಲ್ಲಿ ಮೊದಲು ದೇಶವನ್ನು ಬರಗಾಲದಿಂದ ಮುಕ್ತಗೊಳಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ದೇಶದಲ್ಲಿ ಬಡತನ, ಬರಗಾಲ ಮತ್ತು ನಿರುದ್ಯೋಗ ಕಾಂಗ್ರೆಸ್ ಪಕ್ಷ ನೀಡಿದ ಉಡುಗೊರೆಗಳಾಗಿವೆ. ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ಮೋದಿ ದೇಶವನ್ನು ಕಾಂಗ್ರೆಸ್ ಮಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದ್ದರು.ಲೋಕಸಭೆ ಚುನಾವಣೆಯಲ್ಲಿ ಅದನ್ನು ಸಾಧಿಸಲಾಯಿತು. ದೇಶವನ್ನು ಬರಗಾಲದಿಂದ ಮುಕ್ತಗೊಳಿಸದಿದ್ದಲ್ಲಿ ಕಾಂಗ್ರೆಸ್ ಮುಕ್ತ ಭಾರತವಾಗಲು ಸಾಧ್ಯವಿಲ್ಲ ಎಂದರು
ಮಹಾರಾಷ್ಟ್ರದ ಬುಂದೇಲ್ಖಂಡ್ ಮತ್ತು ಮರಾಠವಾಡಾ ಪ್ರದೇಶಗಳಲ್ಲಿ ಎದುರಾಗಿರುವ ಬರಗಾಲವನ್ನು ತಿಳಿಯಲು ಪ್ರಧಾನಿ ಮೋದಿ ಪ್ರವಾಸ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಏತನ್ಮಧ್ಯೆ, ಮಹಾರಾಷ್ಟ್ರ ಹಣಕಾಸು ಖಾತೆ ಸಚಿವ ಸುಧೀರ್ ಮುಂಗಾಂತಿವಾರ್ ಮಾತನಾಡಿ, ರಾಜ್ಯದಲ್ಲಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ. ಬರಗಾಲದಿಂದಾಗಿ ಲಕ್ಷಾಂತರ ಜನರು ತೊಂದರೆ ಎದುರಿಸುತ್ತಿದ್ದಾರೆ ಎಂದು ಗುಡುಗಿದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಾಯಕತ್ವದಲ್ಲಿ ಬರಗಾಲ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಮುಂಗಾಂತಿವಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.