ಭಾರತ ಹಿಂದು ದೇಶವಾಗಿದೆ.ನನ್ನನ್ನು ನಾನು ಹಿಂದು ಕ್ರಿಶ್ಚಿಯನ್ ಎಂದು ಗುರುತಿಸುತ್ತೇನೆ ಎಂದು ಗೋವಾದ ಉಪಮುಖ್ಯಮಂತ್ರಿ ಬಿಜೆಪಿ ನಾಯಕ ಫ್ರಾನ್ಸಿಸ್ ಡಿಸೋಜಾ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಬೀಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು ಹಿಂದು ರಾಷ್ಟ್ರವಾಗಿಸಲಿದ್ದಾರೆ ಎನ್ನುವ ಗೋವಾ ಸಂಪುಟದ ಸಚಿವ ದೀಪಕ್ ಧಾವಲಿಕರ್ ಹೇಳಿಕೆಯನ್ನು ಡಿಸೋಜಾ ಸಮರ್ಥಿಸಿಕೊಂಡಿದ್ದಾರೆ.
ಶತ ಶತಮಾನಗಳಿಂದಲೂ ಭಾರತ ಹಿಂದು ರಾಷ್ಟ್ರವಾಗಿದೆ ಮುಂದೆಯೂ ಹಿಂದು ರಾಷ್ಟ್ರವಾಗಿರುತ್ತದೆ. ಹಿಂದು ರಾಷ್ಟ್ರವನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಸಂಪುಟದಲ್ಲಿ ಎರಡನೇ ಸ್ಥಾನದಲ್ಲಿರುವ ಮಾಪುಸಾ ಕ್ಷೇತ್ರದ ಶಾಸಕ, ಸಚಿವ ಡಿಸೋಜಾ, ದೇಶದಲ್ಲಿರುವ ಪ್ರತಿಯೊಬ್ಬರು ಹಿಂದುಗಳಾಗಿದ್ದಾರೆ. ಪ್ರತಿಯೊಬ್ಬ ಭಾರತೀಯ ಕೂಡಾ ಹಿಂದು . ನಾನು ಕೂಡಾ ಹಿಂದು ಕ್ರಿಶ್ಚಿಯನ್ ಎಂದು ಸಮರ್ಥಿಸಿಕೊಂಡಿದ್ದಾರೆ.
ಗೋವಾ ಸಚಿವ ದೀಪಕ್ ಧಾವಲಿಕರ್ ಅವರಿಗೆ ಸ್ಪಷ್ಟತೆಯಿಲ್ಲ. ಯಾಕೆಂದರೆ ಭಾರತ ಈಗಾಗಲೇ ಹಿಂದು ರಾಷ್ಟ್ರವಾಗಿದೆ ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತವನ್ನು ಹಿಂದು ರಾಷ್ಟ್ರವಾಗಿಸಲಿದ್ದಾರೆ ಎನ್ನುವ ಗೋವಾ ಸಂಪುಟದ ಸಹಕಾರ ಖಾತೆ ಸಚಿವ ದೀಪಕ್ ಧಾವಲಿಕರ್ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು.