Webdunia - Bharat's app for daily news and videos

Install App

ಕೇರಳದಲ್ಲಿ ಹದಿಹರೆಯ ಯುವತಿಯರಲ್ಲಿ ಹೆಚ್ಚಾಗುತ್ತಿದೆ ಗರ್ಭಧಾರಣೆ

Webdunia
ಶುಕ್ರವಾರ, 8 ಅಕ್ಟೋಬರ್ 2021 (17:05 IST)
ಕೇರಳ : ದೇಶದಲ್ಲಿ ಹೆಚ್ಚು ಶಿಕ್ಷಿತರಿರುವ ರಾಜ್ಯ, ದೇವರ ನಾಡು ಎಂದು ಕರೆಸಿಕೊಳ್ಳುವ ಕೇರಳದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿವೆ.

ಇದರ ಪರಿಣಾಮ 2019ರಲ್ಲಿ 20,995 ಹೆರಿಗೆಯಾದ ಮಹಿಳೆಯರು ಹದಿಹರೆಯದವರಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಸರ್ಕಾರವೇ ಬಿಡುಗಡೆ ಮಾಡಿರುವ ಮಾಹಿತಿಯಿಂದ ಬಹಿರಂಗವಾಗಿದೆ.
ಕೇರಳ ಸರ್ಕಾರದ ಅರ್ಥಶಾಸ್ತ್ರ ಮತ್ತು ಅಂಕಿ ಅಂಶಗಳ ವಿಭಾಗವು ವಿವರವಾದ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿ ಆಘಾತಕಾರಿಯಾಗಿದೆ. 2018ರಲ್ಲೂ ಇದೇ ರೀತಿ 20461 ಪ್ರಕರಣಗಳನ್ನು ಗುರುತಿಸಲಾಗಿದ್ದು, ನಂತರದ ವರ್ಷದಲ್ಲೇ 534 ಪ್ರಕರಣಗಳ ಹೆಚ್ಚಳ ಕಂಡು ಬಂದಿದೆ. ಈ ಡೇಟಾ ಕೇರಳದಲ್ಲಿ ಬಾಲ್ಯವಿವಾಹ ಮತ್ತು ಗರ್ಭಧಾರಣೆ ಹೇಗೆ ಚಾಲ್ತಿಯಲ್ಲಿದೆ ಎಂಬ ಘೋರ ವಾಸ್ತವವನ್ನು ತೋರಿಸುತ್ತದೆ.
15ರಿಂದ 19 ವಯಸ್ಸಿನ ಹುಡುಗಿಯರು, ನಗರ ಪ್ರದೇಶಗಳಲ್ಲಿ 10,613 ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 5,747 ಮಕ್ಕಳಿಗೆ ಜನ್ಮ ನೀಡಿರುವುದು ಈ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿವೆ. ಇದಲ್ಲದೆ, 5,239 ಹೆರಿಗೆಗಳು ಸಿಸೇರಿಯನ್ ಆಗಿವೆ. 2018ರಲ್ಲಿ ಈ ಯಾವುದೇ ತಾಯಂದಿರ ಮರಣ ವರದಿಯಾಗಿಲ್ಲದಿದ್ದರೂ, 2019ರಲ್ಲಿ ಎರಡು ಸಾವುಗಳು ದಾಖಲಾಗಿವೆ. ಒಟ್ಟಾರೆ, 99 ಹೆರಿಗೆಗಳಲ್ಲಿ ಮಹಿಳೆಯ ಸಾವು ಅಥವಾ ಹೆರಿಗೆಯ ಮೊದಲು ಅಥವಾ ಹೆರಿಗೆಯ ಸಮಯದಲ್ಲಿ ಮಗು ಸಾವಿಗೀಡಾಗಿರುವ ಪ್ರಕರಣಗಳೂ ಕಂಡು ಬಂದಿವೆ. ಇನ್ನು, 20,597 ಹುಡುಗಿಯರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದರೆ, 316 ಹದಿಹರೆಯದ ಬಾಲಕಿಯರು ಎರಡನೇ ಮಗುವಿಗೆ, 59 ಬಾಲಕಿಯರು ಮೂರನೇ ಮಗುವಿಗೆ ಹಾಗೂ 16 ಹುಡುಗಿಯರು 4ನೇ ಮಗುವಿಗೆ ಜನ್ಮ ನೀಡಿದ್ದಾರೆ.
ಕುತೂಹಲಕಾರಿ ಸಂಗತಿ ಎಂದರೆ, ಈ ಹದಿಹರೆಯದವರಲ್ಲಿ ಹೆಚ್ಚಿನವರು ಪ್ರಾಥಮಿಕ ಅಥವಾ ಉನ್ನತ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ 4,285 ಹುಡುಗಿಯರು ಹಿಂದೂ ಸಮುದಾಯದವರಾಗಿದ್ದರೆ, 16,089 ಹುಡುಗಿಯರು ಮುಸ್ಲಿಂ ಸಮುದಾಯದವರು ಹಾಗೂ 586 ಕ್ರಿಶ್ಚಿಯನ್ ಸಮುದಾಯದ ಹುಡುಗಿಯರು ತಾಯಂದಿರಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price today: ಚಿನ್ನದ ಬೆಲೆ ಇಂದು ಇನ್ನೂ ಎತ್ತರ ಇನ್ನೂ ಹತ್ತಿರ

Jammu Kashmir cloud burst: ಮೇಘಸ್ಪೋಟಕ್ಕೆ ಹರಿದು ಬಂತು ಕಟ್ಟಡಗಳು, ವಾಹನಗಳು: ವಿಡಿಯೋ

DGP Om Prakash Rao ಹತ್ಯೆಯಾಗಿದ್ದು ಹೇಗೆ, ಪತ್ನಿ ಪಲ್ಲವಿ ಹೇಳಿದ್ದು ಕೇಳಿದರೆ ಬೆಚ್ಚಿ ಬೀಳ್ತೀರಿ

DK Shivakumar: ಡಿಕೆ ಶಿವಕುಮಾರ್ ಟೆಂಪಲ್ ರನ್ ಹಿಂದಿದೆ ಭಾರೀ ಲೆಕ್ಕಾಚಾರ: ಬಿಜೆಪಿಗೆ ಗಡ ಗಡ

Karnataka Weather: ರಾಜ್ಯದಲ್ಲಿ ಈ ವಾರ ಮಳೆಯಿರಲಿದೆಯೇ ಇಲ್ಲಿದೆ ಸಂಪೂರ್ಣ ಹವಾಮಾನ ವರದಿ

ಮುಂದಿನ ಸುದ್ದಿ
Show comments