Webdunia - Bharat's app for daily news and videos

Install App

ಕೊಲೆಯಾಗಲಿದ್ದೇನೆ ಎಂದಳು, ಮರುದಿನ ಕೊಲೆಯಾದಳು

Webdunia
ಶುಕ್ರವಾರ, 26 ಆಗಸ್ಟ್ 2016 (17:05 IST)
ಉತ್ತರ ಪ್ರದೇಶ್ ಪೊಲೀಸರಿಗೆ ಇತ್ತೀಚಿಗೆ ಒಂದು ವಿಡಿಯೋ ದೊರೆಯಿತು. ಅದು ರೈಲಿನ ಟಾಯ್ಲೆಟ್‌ರೂಮ್‌ನಲ್ಲಿ ತೆಗೆದುಕೊಂಡಂತಿತ್ತು. ಅದರಲ್ಲಿ ಕ್ಯಾಮರಾವನ್ನು ನೇರವಾಗಿ ನೋಡುತ್ತಿರುವ ಯುವತಿ ಸ್ಥಿರ ಧ್ವನಿಯಲ್ಲಿ ಹೇಳಿದ್ದಾಳೆ: ನನ್ನ ತಂದೆ, ಅಣ್ಣ ನನ್ನನ್ನು ಕೊಲ್ಲಲಿದ್ದಾರೆ. ಈ ಕಾರಣಕ್ಕಾಗಿಯೇ ನನ್ನನ್ನು ಹಳ್ಳಿಗೆ ವಾಪಸ್ ಕರೆದೊಯ್ಯುತ್ತಿದ್ದಾರೆ. ನನ್ನ ಜೀವ ಅಪಾಯದಲ್ಲಿದೆ.  ನನಗೇನಾದರು ಆದರೆ ಅವರೇ ಕಾರಣರು. ನಾನು ಇಮ್ರಾನ್‌ನನ್ನು ಮದುವೆಯಾಗ ಬಯಸುತ್ತೇನೆ.
 
ಈ ವಿಡಿಯೋವನ್ನು ಯಾರು ಅಪ್ಲೋಡ್ ಮಾಡಿದರೋ ಗೊತ್ತಿಲ್ಲ. ಗುರುವಾರ ಇದು ವೈರಲ್ ಆಗಿ ಓಡಿದೆ. ಆದರೆ ಅಷ್ಟರಲ್ಲಾಗಲೇ 26 ವರ್ಷದ ಸೋನಿ ಹೆಣವಾಗಿದ್ದಳು. 
 
ಅಂತರ್ಜಾಲದಲ್ಲಿ ಈ ವಿಡಿಯೋ ಕ್ಲಿಪ್ ನೋಡಿದ ಪೊಲೀಸರು ಆಕೆಯ ಗ್ರಾಮಕ್ಕೆ ಬಂದು, ವಿಡಿಯೋದ ಆಧಾರದ ಮೇಲೆ ತಂದೆ-ತಾಯಿ, ನಾಲ್ಕು ಜನ ಸಹೋದರರು ಸೇರಿದಂತೆ ಮನೆಯ 6 ಜನ ಸದಸ್ಯರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಮರ್ಯಾದಾ ಹತ್ಯೆ ಎಂಬ ಅನುಮಾನ ವ್ಯಕ್ತವಾಗಿದೆ. 
 
ಮುಂಬೈನಲ್ಲಿ ವಾಸವಾಗಿದ್ದ ಕುಟುಂಬ ಒತ್ತಾಯಪೂರ್ವಕವಾಗಿ ಸೋನಿಯನ್ನು ಉತ್ತರ ಪ್ರದೇಶದಲ್ಲಿರುವ ತಮ್ಮಗ್ರಾಮಕ್ಕೆ ಕರೆದೊಯ್ದಿತ್ತು ಎಂದು ತಿಳಿದು ಬಂದಿದೆ. 
 
ಆಕೆಯ ದೇಹವನ್ನು ಸಮಾಧಿಯಿಂದ ಮೇಲೆತ್ತಲಾಗಿದ್ದು ಆಕೆಯ ದೇಹದ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 
 
ಕಳೆದ ಕೆಲ ದಿನಗಳ ಹಿಂದೆ ಕುಟುಂಬ ಗ್ರಾಮಕ್ಕೆ ಆಗಮಿಸಿತ್ತು. ಕಳೆದ ಶುಕ್ರವಾರ ಮಗಳು ಸಾವನ್ನಪ್ಪಿದಳು ಎಂದು ಕುಟುಂಬದವರು ಹೇಳಿದರು. ಆದರೆ ಹೇಗೆ ಸತ್ತಳು ಎಂದು ಹೇಳಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹೆಚ್ಚುತ್ತಿರುವ ಪ್ರಕರಣಗಳ ಮಧ್ಯೆ ಜಯದೇವ್‌ಗೆ ರೋಗಿಗಳ ಸಂಖ್ಯೆ ಹೆಚ್ಚಳ: ಹೆಚ್ಚುವರಿ ತಜ್ಞ ವೈದ್ಯರ ನಿಯೋಜನೆ

ವೈಜ್ಞಾನಿಕ ಸಾಧನೆಯನ್ನು ಅಪಮಾನಿಸುವ ಮುಖ್ಯಮಂತ್ರಿ ಕ್ಷಮೆ ಕೇಳಲಿ: ಪ್ರಲ್ಹಾದ್ ಜೋಶಿ

ಪ್ರವೀಣ್ ನೆಟ್ಟಾರು ಪ್ರಕರಣ: ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ

ಹಿಮಾಚಲ ಪ್ರದೇಶದಲ್ಲಿ ವರುಣನ ಅಬ್ಬರಕ್ಕೆ 37 ಸಾವು, 400ಕೋಟಿ ನಷ್ಟ

ವಿಮಾನದಲ್ಲಿ ಸಹಪ್ರಯಾಣಿಕನ ಮೂತಿಗೆ ಗುದ್ದಿದ ವ್ಯಕ್ತಿ: ಭಾರತ ಮೂಲದ ಪ್ರಯಾಣಿಕ ಅರೆಸ್ಟ್‌

ಮುಂದಿನ ಸುದ್ದಿ
Show comments