Webdunia - Bharat's app for daily news and videos

Install App

ಈ ಗ್ರಾಮದಲ್ಲಿ ಮದ್ಯ ಕುಡಿದರೆ ತೆಂಗಿನಕಾಯಿ ದಂಡ

Webdunia
ಗುರುವಾರ, 25 ಆಗಸ್ಟ್ 2016 (18:14 IST)
ಮದ್ಯ ಉತ್ಪಾದಿಸಿದರೆ ಅಥವಾ ಕುಡಿದರೆ ತೆಂಗಿನಕಾಯಿಯನ್ನು ದಂಡವಾಗಿ ತೆರಬೇಕು. ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಪಂಚಾಯತ್ ತಂದಿರುವ ಹೊಸ ನಿಯಮವಿದು. 

ಇಲ್ಲಿಯ ಜನರು ಸ್ಥಳೀಯವಾಗಿ ತಯಾರಿಸಿದ ಅಕ್ಕಿ ಬಿಯರ್‌ನ್ನು ಕುಡಿಯುತ್ತಾರೆ. ಮುಂಜಾನೆಯಿಂದ ಕುಡಿಯಲು ಆರಂಭಿಸಿದವರು ದಿನವಿಡಿ ಕುಡಿಯುತ್ತಲೇ ಇರುತ್ತಾರೆ. ಯುವಕರಷ್ಟೇ ಅಲ್ಲ, ಮಕ್ಕಳು ಸಹ ಈ ದುರಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ತೆಂಗಿನಕಾಯಿಯನ್ನು ದಂಡವಾಗಿ ನೀಡುವುದು ಚಿಕ್ಕ ಶಿಕ್ಷೆಯಾಗಿ ಕಾಣಬಹುದು. ಆದರೆ ಸಾರ್ವಜನಿಕವಾಗಿ ಅಪಮಾನವಾಗುತ್ತದೆಯಲ್ಲ. ತಪ್ಪನ್ನು ಮರುಕಳಿಸಿದರೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಲಾಗುವುದು ಎಂದು ಮೈಂಗಡಿ ಗ್ರಾಮ ಪಂಚಾಯತ್ ಸರ್ಪಂಚ್ ಸನಿಚರಣ್ ಮಿಂಜ್( 32) ಹೇಳಿದ್ದಾರೆ.
 
ಗ್ರಾಮದಲ್ಲಿ ಮನರಂಜನೆ ಮತ್ತು ವಿದ್ಯುತ್ ಕೊರತೆಯಿಂದ ಗುಂಪುಗುಂಪಾಗಿ ಕುಳಿತುಕೊಳ್ಳುವ ಜನರು ಟೈಮ್ ಪಾಸ್ ಮಾಡಲು ಕುಡಿಯುವುದು ಮತ್ತು ಚಿಟ್ -ಚಾಟ್ ಮಾಡುವುದನ್ನು ಮಾಡುತ್ತಾರೆ. ಗ್ರಾಮದಲ್ಲಿ ಲಿಕ್ಕರ್ ಬ್ಯಾನ್ ಮಾಡುವುದು ಸವಾಲಿನ ಕೆಲಸ. ಅಕ್ಕಿ ಬಿಯರ್ ಕುಡಿಯುವುದು ಇಲ್ಲಿನ ಹಳೆಯ ಸಂಸ್ಕೃತಿ. ಆದರೆ  ಮಕ್ಕಳು ಶಾಲೆಗೆ ಹೋಗುವುದನ್ನು ಬಿಟ್ಟು ಕುಡಿಯಲು ಕುಳಿತಾಗ,  ಯುವಕರು ಕುಡಿತದ ಅಮಲಿನಲ್ಲಿ ಕೆಲಸ ಮಾಡುವುದನ್ನೇ ಬಿಟ್ಟಾಗ ಕಳವಳ ಪಡುವಂತ ಪರಿಸ್ಥಿತಿ ನಿರ್ಮಾಣವಾಯಿತು. ಕುಡಿತ ನಿಲ್ಲಿಸುವಂತೆ ಜನರಿಗೆ ಜಾಗೃತಿ ಮೂಡಿಸುವುದು ಬಹಳ ಸವಾಲಿನ ಕೆಲಸ ಎಂದು ಪದವೀಧರರಾಗಿರುವ ಅವರು ಹೇಳಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Air India Flight Crash: ಗಂಡನ ಭೇಟಿಗಾಗಿ ಲಂಡನ್‌ಗೆ ಹೊರಟ್ಟಿದ್ದ ಮಹಿಳೆ ಸೇರಿದ್ದು ಮಸಣಕ್ಕೆ, ಕಣ್ಣೀರ ಕತೆ

Air India Crash: 10 ನಿಮಿಷ ಲೇಟ್‌, ಟ್ರಾಫಿಕ್‌ನಲ್ಲಿ ಸಿಲುಕಿ ಮಹಿಳೆ ಜಸ್ಟ್ ಬಚಾವ್‌

AirIndia Crash: ಭಾರತದಲ್ಲಿ ಇದು ಕೊನೆಯ ರಾತ್ರಿ: ಲಂಡನ್ ಮೂಲದ ಜೇಮೀ ಮೀಕ್ ಭಾವುಕ ಪೋಸ್ಟ್‌

Air India Mishap: ಕೊನೆ ಕ್ಷಣದಲ್ಲಿ ಫೈಲಟ್ ಆ ಪದ ಬಳಸಬೇಕೆಂದರೆ ಎಂಥ ಕಠಿಣ ಪರಿಸ್ಥಿತಿ ಇತ್ತು ಗೊತ್ತಾ

ಮುಂದಿನ ಸುದ್ದಿ
Show comments