Webdunia - Bharat's app for daily news and videos

Install App

ಮಾರ್ಚ್ ತಿಂಗಳಲ್ಲಿ ರಾಮ ಮಂದಿರ ಅಭಿಯಾನ ಪ್ರಾರಂಭಿಸಲಿರುವ ವಿಎಚ್‌ಪಿ

Webdunia
ಗುರುವಾರ, 29 ಜನವರಿ 2015 (18:42 IST)
ರಾಮ ಮಂದಿರ ನಿರ್ಮಾಣ ಚಳುವಳಿಗೆ ಬೆಂಬಲವನ್ನು ಪಡೆದುಕೊಳ್ಳುವ ದಿಶೆಯಲ್ಲಿ ವಿಶ್ವ ಹಿಂದೂ ಪರಿಷದ್ ಉತ್ತರ ಪ್ರದೇಶದ ಸಣ್ಣಪುಟ್ಟ ಪ್ರದೇಶಗಳಿಗೆ ಭೇಟಿ ನೀಡಲು ಮತ್ತು ಮಾರ್ಚ್‌ನಲ್ಲಿ ಆಚರಿಸಲ್ಪಡುವ ರಾಮನವಮಿ ಹಬ್ಬಕ್ಕೂ ಮುನ್ನವೇ ದೇಶಾದ್ಯಂತ ಶ್ರೀರಾಮ ಜನ್ಮೋತ್ಸವವನ್ನು ಆಚರಿಸಲು ತೀರ್ಮಾನಿಸಿದೆ. 
 
ಅಭಿಯಾನದಲ್ಲಿ ಭಾಗವಹಿಸುತ್ತೇವೆ ಎಂದು ಜನರಿಂದ ಪ್ರತಿಜ್ಞೆಯನ್ನು ಮಾಡಿಸಲು  ವಿಶ್ವ ಹಿಂದೂ ಪರಿಷದ್ ಯೋಜಿಸಿದೆ. ಈ ರೀತಿಯ ಕಾರ್ಯಕ್ರಮಗಳನ್ನು  ಈ ಹಿಂದೆ ಸಹ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಮ ಜನ್ಮೋತ್ಸವದ ಅಂಗವಾಗಿ ಸುಂದರ ಕಾಂಡದ ಪಠನ, ಸಾಧುಸಂತರಿಂದ ಧರ್ಮೋಪದೇಶ, ಮತ್ತು ಯಜ್ಞಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. 
 
ಪ್ರಸ್ತುತ ನಡೆಯುತ್ತಿರುವ ಹಿಂದೂ ಸಮ್ಮೇಳನಗಳು ದೇಶದಾದ್ಯಂತ ಮೊಹಲ್ಲಾ ಸಮಿತಿಗಳ ಸಂಖ್ಯೆಯನ್ನು ಒಂದು ಲಕ್ಷಕ್ಕೆ  ಹೆಚ್ಚಿಸಿವೆ. ಮೊಹಲ್ಲಾ ಸಮಿತಿ ಮಟ್ಟದಲ್ಲಿ ರಾಮ ಜನ್ಮಮಹೋತ್ಸವಗಳನ್ನು ನಡೆಸುವುದರ ಉದ್ದೇಶವೇನೆಂದರೆ ವಿಎಚ್‌ಪಿ ಜತೆಗೆ ರಾಮಜನ್ಮಭೂಮಿ ಚಳುವಳಿಯಲ್ಲಿ ಭಾಗವಹಿಸುತ್ತೇವೆ ಎಂದು ಪ್ರತಿಜ್ಞೆಗೈಯ್ಯಲು ಮನವಿ ಮಾಡುವುದಾಗಿದೆ ಎಂದು ವಿಹಿಂಪದ ಪ್ರಧಾನ ಕಾರ್ಯದರ್ಶಿ ಜೈನ್ ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments