Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ: ಕಲ್ಲು ಎತ್ತಿಹಾಕಿ ತಾಯಿಯ ಹತ್ಯೆಗೈದ ಪುತ್ರ ಮಹಾಶಯ

ಅನೈತಿಕ ಸಂಬಂಧ: ಕಲ್ಲು ಎತ್ತಿಹಾಕಿ ತಾಯಿಯ ಹತ್ಯೆಗೈದ ಪುತ್ರ ಮಹಾಶಯ
ಬೆಂಗಳೂರು , ಶುಕ್ರವಾರ, 4 ಸೆಪ್ಟಂಬರ್ 2015 (11:44 IST)
ತನ್ನ ತಾಯಿ ತನಗೆ ತಿಳಿದರೂ ನಿರಂತರವಾಗಿ ಅನೈತಿಕ ಸಂಬಂಧ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬೇಸತ್ತ ಪುತ್ರನೋರ್ವ ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಲಗ್ಗೇರೆ ಬಳಿಯ ರಾಜೇಶ್ವರಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
 
ಪುತ್ರನಿಂದ ಹತ್ಯೆಗೊಳಗಾದ ಮಹಿಳೆಯನ್ನು ಸುಶೀಲಮ್ಮ(40) ಎಂದು ಹೇಳಲಾಗಿದ್ದು, ಈತಕೆಯ ಪುತ್ರ ಶಿವಕುಮಾರ್‌ ಹತ್ಯೆಗೈದ ಆರೋಪಿಯಾಗಿದ್ದಾನೆ. 
 
ಪ್ರಕರಣದ ಹಿನ್ನೆಲೆ: ತನ್ನ ತಾಯಿಯ ಅನೈತಿಕ ಸಂಬಂಧದ ಬಗ್ಗೆ ತನಗೆ ತಿಳಿದರೂ ಕೂಡ ಆ ಚಾಳಿಯನ್ನು ನಿಲ್ಲಿಸಿಲ್ಲ ಎಂದು ಕುಪಿತಗೊಂಡ ಪುತ್ರ ಶಿವಕುಮಾರ್, ತಾಯಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದಾನೆ. 
 
ಈ ಪ್ರಕರಣ ಸಂಬಂಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada