Webdunia - Bharat's app for daily news and videos

Install App

ಸತ್ತ ಕುದುರೆ ಮಾತನಾಡಲಾಗದಿದ್ದರೂ ನಾನು ಮಾತನಾಡುತ್ತೇನೆ: ವಾದ್ರಾ ವಾಗ್ವಾದ

Webdunia
ಸೋಮವಾರ, 29 ಆಗಸ್ಟ್ 2016 (10:05 IST)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಪೊಲೀಸ್ ಕುದುರೆ ಶಕ್ತಿಮಾನ್ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಗಣೇಶ್ ಜೋಷಿ ಜತೆ ವಾಗ್ವಾದ ನಡೆಸಿದ ಘಟನೆ ಡೆಹ್ರಾಡೂನ್ ವಿಮಾನನಿಲ್ದಾಣದಲ್ಲಿ ನಡೆದಿದೆ.
 
 ಡೆಹ್ರಾಡೂನ್ ವಿಮಾನನಿಲ್ದಾಣದಲ್ಲಿ ಬಿಜೆಪಿ ಶಾಸಕ ಗಣೇಶ್ ಜೋಷಿ ಅವರ ಸಹಚರರ ಜತೆ ಕೆಲವು ಬಿಜೆಪಿ ಸಂಸದರನ್ನು ಸ್ವಾಗತಿಸಲು ನಿಂತಿದ್ದರು. ನಾನು ಅವರತ್ತ ಧಾವಿಸಿ ಶಕ್ತಿಮಾನ್ ಸಾವಿನ ಕುರಿತಂತೆ ನನಗೆ ಅನಿಸಿದ್ದನ್ನು ಅವರಿಗೆ ಹೇಳಿದೆ. ಅವರು ಕೂಡಲೇ ಕಿರುಚಾಡಿ, ಕೂಗಾಡಿ, ಬೆದರಿಕೆ ಹಾಕುತ್ತಾ ನನ್ನತ್ತ ಧಾವಿಸಿದರು. ಆಗ ನಾನು ಸತ್ತ ಕುದುರೆ ಮಾತನಾಡಲಾಗದಿದ್ದರೂ ನಾನು ಮಾತನಾಡುತ್ತೇನೆ ಎಂದು ಹೇಳಿದೆ. ಜೋಷಿ ಅವರನ್ನು ಕೂಡಲೇ ವಿಮಾನನಿಲ್ದಾಣದಿಂದ ಅವರ ಗೂಂಡಾಗಳ ಜತೆ ಹೊರದೂಡಿದರು ಎಂದು ವಾದ್ರಾ ವಿವರಿಸಿದರು.

ಇದೇ ಮಾರ್ಚ್‌ ತಿಂಗಳಲ್ಲಿ ಶಕ್ತಿಮಾನ್ ಕುದುರೆಗೆ ಜೋಷಿ ಥಳಿಸಿದ್ದಾರೆಂದು ಆರೋಪಿಸಲಾಗಿತ್ತು.  ಕುದುರೆಯ ಹಿಂದಿನ ಒಂದು ಕಾಲು ಮುರಿದು ಗಾಯಗಳಿಂದಾಗಿ ಅಸುನೀಗಿತ್ತು.
 
 ಶಕ್ತಿಮಾನ್ ಸಾವಿನಿಂದ ರಾಷ್ಟ್ರೀಯ ಆಕ್ರೋಶ ಹೊರಹೊಮ್ಮಿ ಕಾಂಗ್ರೆಸ್ ನಾಯಕರು ಮತ್ತು ಆರೋಪಿತ ಬಿಜೆಪಿ ಶಾಸಕ ಜೋಷಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಕುದುರೆಯ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಇದಾದ ಬಳಿಕ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಉದ್ಯಾನವೊಂದಕ್ಕೆ ಶಕ್ತಿಮಾನ್ ಹೆಸರನ್ನು ಇಡುವುದಾಗಿ ಜೋಷಿ ಭರವಸೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold price today: ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ

Karnataka caste census: ದೇಶದ ಪ್ರಮುಖ ನಾಯಕರ ಜಾತಿ, ಸಮುದಾಯ ಯಾವುದು ಇಲ್ಲಿದೆ ವಿವರ

Delhi house collapse: ದೆಹಲಿಯಲ್ಲಿ ಮನೆ ಕುಸಿಯುತ್ತಿರುವ ಭಯಾನಕ ವಿಡಿಯೋ ವೈರಲ್: ಘಟನೆಯಲ್ಲಿ ನಾಲ್ವರು ಸಾವು

Gun firing on Mutthappa Rai son Ricky rai:ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ

Karnataka Weather: ಇಂದು ಮಳೆ ಈ ಜಿಲ್ಲೆಯವರಿಗೆ ಮಾತ್ರ

ಮುಂದಿನ ಸುದ್ದಿ
Show comments