Webdunia - Bharat's app for daily news and videos

Install App

ಪುತ್ರನ ಅವ್ಯವಹಾರ ಸಾಬೀತಾದಲ್ಲಿ ರಾಜಕೀಯಕ್ಕೆ ಗುಡ್‌ಬೈ: ರಾಜನಾಥ್ ಸಿಂಗ್

Webdunia
ಬುಧವಾರ, 27 ಆಗಸ್ಟ್ 2014 (18:11 IST)
ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ಎದ್ದಿರುವ ಅವ್ಯವಹಾರದ ಆರೋಪಗಳು ಕೇವಲ ವದಂತಿಗಳು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದು, ಈ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದರೂ ತಾವು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಅವರು ಹೇಳಿದ್ದಾರೆ.
 
ಕಳೆದ 15 ರಿಂದ 20 ದಿನಗಳಿಂದಿಚೆಗೆ ತಮ್ಮ ಕುಟುಂಬ ಸದಸ್ಯರು ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಇದು ನಿರಾಧಾರವಾಗಿರುವುದರಿಂದ ಕೆಲವು ದಿನಗಳಲ್ಲಿ ತಾನಾಗಿಯೇ ವದಂತಿಗಳು ಮರೆಯಾಗಬಹುದು ಎಂದು ಭಾವಿಸಿದ್ದೆ. ಆದರೆ ದಿನದಿಂದ ದಿನಕ್ಕೆ ವದಂತಿಗಳು ಬಲಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇಶದ ಮುಂದೆ ನಾನು ಮಾತನಾಡಲೇಬೇಕಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
 
ಇಂದು ತುರ್ತು ಸುದ್ದಿಗೋಷ್ಠಿ ಕರೆದಿದ್ದ ರಾಜನಾಥ್ ಸಿಂಗ್ ಅವರು, ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದರೂ ಸರಿ, ನಾನು ರಾಜಕೀಯದಿಂದಲೇ ನಿವೃತ್ತಿಯಾಗಿ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎಂದಿದ್ದಾರೆ.
 
ಈ ಆರೋಪದ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಮನವರಿಕೆ ಮಾಡಲಾಗಿದೆ. ಅವರು ಈ ಆರೋಪದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಇದು ಸಂಪೂರ್ಣ ಆಧಾರರಹಿತ ಎಂದು ಬಣ್ಣಿಸಿದ್ದಾರೆ ಎಂದು ಸಿಂಗ್‌ ತಿಳಿಸಿದರು.
 
ಆರೋಪಿತ ದುರ್ನಡತೆಗಾಗಿ ತಮ್ಮನ್ನು ಹಾಗೂ ತಮ್ಮ ಪುತ್ರ ಪಂಕಜ್‌ ಸಿಂಗ್‌ ಅವರನ್ನು ಪ್ರಧಾನಿ ಮೋದಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಇದು ತಮ್ಮ ಸಂಪುಟ ಸಹೋದ್ಯೋಗಿ ಹಾಗೂ ಪಕ್ಷದಲ್ಲಿರುವ ಎದುರಾಳಿ ವ್ಯಕ್ತಿಯೊಬ್ಬರು ಹಬ್ಬಿಸುತ್ತಿರುವ ವದಂತಿ ಎಂದು ರಾಜನಾಥ್‌ ದೂರಿದರು.
 
ವದಂತಿಗಳನ್ನು ಹಬ್ಬಿಸುತ್ತಿರುವವರು ಯಾರು ಎಂಬ ಪ್ರಶ್ನೆಗೆ, ಪತ್ರಕರ್ತರೇ ಇದನ್ನು ತನಿಖೆ ಮಾಡಿ ತಿಳಿದುಕೊಳ್ಳಿ ಎಂದು ಗೃಹಸಚಿವರು ನುಡಿದರು.
 
ವದಂತಿಗಳ ಬಗ್ಗೆ ಆರೆಸ್ಸೆಸ್‌ಗೆ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಗೃಹಚಿವರು ನಕಾರಾತ್ಮಕವಾಗಿ ಉತ್ತರಿಸಿದರು. ಈ ಬಗ್ಗೆ ಸಂಘದ ಜತೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.
 
ಗೃಹಸಚಿವ ರಾಜನಾಥ್ ಸಿಂಗ್‌ ವಿರುದ್ಧ ಆರೋಪಗಳು ಹಸಿ ಹಸಿ ಸುಳ್ಳುಗಳು ಎಂದು ಪ್ರಧಾನಿ ಕಚೇರಿ ಹೇಳಿದೆ. ''ವರದಿಗಳು ಸಂಪೂರ್ಣ ಸುಳ್ಳು, ಚಾರಿತ್ರ್ಯಹರಣ ಮಾಡಲು ಹಾಗೂ ಸರಕಾರಕ್ಕೆ ಮಸಿ ಬಳಿಯಲು ನಡೆಸುತ್ತಿರುವ ಪ್ರಯತ್ನಗಳಾಗಿವೆ. ಇಂತಹ ವದಂತಿಗಳನ್ನು ಹರಡುವುದು ದೇಶದ ಹಿತಾಸಕ್ತಿಯನ್ನು ಹಾಳುಗೆಡವಲು ನಡೆಸುವ ಪ್ರಯತ್ನವಾಗಿದ್ದು, ಇವುಗಳನ್ನು ಬಲವಾಗಿ ನಿರಾಕರಿಸಲಾಗಿದೆ'' ಎಂದು ಪ್ರಧಾನಿ ಕಚೇರಿ ಹೇಳಿಕೆ ತಿಳಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments