ಶಿವಸೇನೆ ಕಾರ್ಯಕರ್ತರು ಮುಖಕ್ಕೆ ಮಸಿ ಬಳೆದು ಪಾಕಿಸ್ತಾನ್ ಏಜೆಂಟ್ ಎಂದು ಟೀಕಿಸಿರುವುದನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ, ನಾನು ಪಾಕಿಸ್ತಾನ್ ಏಜೆಂಟ್ ಅಲ್ಲ ಬದಲಿಗೆ ಭಾರತ ಮತ್ತು ಪಾಕಿಸ್ತಾನದ ಶಾಂತಿಯ ಏಜೆಂಟ್ ಎಂದು ತಿರುಗೇಟು ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೊದಲನೇ ದಿನದಿಂದ ದಕ್ಷಿಣ ಏಷ್ಯಾದ ನೆರೆಹೊರೆಯ ರಾಷ್ಟ್ರಗಳಲ್ಲಿ ದೇಶದೊಂದಿಗಿನ ಸಂಬಂಧದಲ್ಲಿ ಸುಧಾರಣೆಯಾಗಿದೆ ಎಂದರು.
ಸಾಮ್ನಾ ಪತ್ರಿಕೆಯ ಮತ್ತು ಶಿವಸೇನೆಯ ವಾಕ್ಸ್ವಾತಂತ್ರ್ಯವನ್ನು ನಾನು ಗೌರವಿಸುತ್ತೇನೆ. ಅದರಂತೆ, ಶಿವಸೇನೆ ಕೂಡಾ ಇತರರ ವಾಕ್ಸ್ವಾತಂತ್ರ್ಯವನ್ನು ಗೌರವಿಸಬೇಕು ಎಂದು ಹೇಳಿದರು.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿಯವರ ನೈದರ್ ಎ ಹಾಕ್ ನಾರ್ ಎ ಡೊವ್ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಮುನ್ನ, ಮಾತುಂಗಾದಲ್ಲಿರುವ ಮನೆಯ ಹೊರಗಡೆ ಸುಂಧೀಂದ್ರ ಕುಲ್ಕರ್ಣಿಯವರಿಗೆ ಶಿವಸೇನೆ ಕಾರ್ಯಕರ್ತರು ಕಪ್ಪು ಪೇಂಟ್ ಬಳೆದು ಅವಮಾನಿಸಿದ್ದರು.