Webdunia - Bharat's app for daily news and videos

Install App

ಅಮ್ಮ, ದೀಪಾವಳಿ ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ: ಹುತಾತ್ಮನಾಗುವ ಮುನ್ನ ತಾಯಿಗೆ ಹೇಳಿದ ಸೈನಿಕ

Webdunia
ಮಂಗಳವಾರ, 25 ಅಕ್ಟೋಬರ್ 2016 (18:11 IST)
ಜಮ್ಮು ಕಾಶ್ಮಿರದ ಆರ್‌.ಎಸ್.ಪುರಾ ಸೆಕ್ಟರ್‌ನಲ್ಲಿ ರವಿವಾರದಂದು ಪಾಕಿಸ್ತಾನ ಸೇನೆಯ ಗುಂಡಿನ ದಾಳಿಗೆ ಹುತಾತ್ಮನಾದ ಬಿಎಸ್‌ಎಫ್ ಯೋಧ, ಹುತಾತ್ಮನಾಗುವ ಕೆಲವೇ ನಿಮಿಷಗಳ ಮುಂಚೆ ತನ್ನ ತಾಯಿಗೆ ಅಮ್ಮ ದೀಪಾವಳಿ ಹಬ್ಬವನ್ನು ಪಾಕಿಸ್ತಾನದೊಂದಿಗೆ ಆಚರಿಸುತ್ತಿದ್ದೇನೆ ಎಂದು ನೀಡಿದ ಹೇಳಿಕೆ ಕಣ್ಣೀರು ತರಿಸುವಂತಹದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಮಧ್ಯ ರಾತ್ರಿ 12 ಗಂಟೆಗೆ ಸುಶೀಲ್ ಕುಮಾರ್ ತನ್ನ ತಾಯಿಗೆ ಕರೆ ಮಾಡಿದಾಗ ಪಾಕಿಸ್ತಾನಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿತ್ತು. ಗುಂಡಿನ ಶಬ್ದ ಕೇಳಿದ ತಾಯಿ, ಆತಂಕಗೊಂಡು ಮಗು ಅಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ವೀರ ಯೋಧ, ಅಮ್ಮ ನಾವು ಪಾಕಿಸ್ತಾನದೊಂದಿಗೆ ದೀಪಾವಳಿ ಆಚರಿಸುತ್ತಿದ್ದೇವೆ ಎಂದು ಉತ್ತರಿಸಿದ್ದ ಗಂಡು ಗಲಿ ಸೈನಿಕ. 
 
ಕುರುಕ್ಷೇತ್ರದ ಪಿಹೋವಾ ನಿವಾಸಿಯಾಗಿದ್ದ ವೀರಯೋಧ ಸುಶೀಲ್ ಕುಮಾರ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಸುಶೀಲ್ ಕುಮಾರ್ ಹುತಾತ್ಮರಾಗಿದ್ದಾರೆ ಎನ್ನುವ ಸುದ್ದಿ ಕುಟುಂಬಕ್ಕೆ ಬರಸಿಡಿಲಿನಂತೆ ಬಡಿದಿತ್ತು. ರಾತ್ರಿ ಮಾತನಾಡಿದ್ದ ಮಗು ಬೆಳಿಗ್ಗೆ ಇಲ್ಲವಾಗಿತ್ತು ಎನ್ನುವ ಸುಶೀಲ್ ತಾಯಿಯ ರೋಧನಕ್ಕೆ ತಡೆಯೊಡ್ಡಲು ಸಾಧ್ಯವೇ?  
 
ಹುತಾತ್ಮ ವೀರಯೋಧ ಸುಶೀಲ್ ಕುಮಾರ್ ಮೃತದೇಹ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು, ಸೇನಾಯೋಧರು ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. 
 
ಪಾಕಿಸ್ತಾನದ ಪಾಪಿ ಯೋಧರ ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸುಶೀಲ್ ಕುಮಾರ್ ರವಿವಾರದಂದು ರಾತ್ರಿ ಇಹಲೋಕ ತ್ಯಜಿಸಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರ್ನಾಟಕ ಬ್ಯಾಂಕ್ ನಲ್ಲಿ ಹಣ ಇಡೋದು ಸೇಫಾ: ಗ್ರಾಹಕರಿಗೆ ಆತಂಕವಾಗಿರೋದು ಯಾಕೆ

Arecanut price: ಅಡಿಕೆಗೆ ವಾರದ ಆರಂಭದಲ್ಲೇ ಇಳಿಕೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ರೇಪ್ ಕೇಸ್: ಸಿಸಿಟಿವಿಯಲ್ಲಿ ದಾಖಲಾಗಿದೆ ಭಯಾನಕ ದೃಶ್ಯ

ಕಾಂಗ್ರೆಸ್ ಬಿಕ್ಕಟ್ಟಿಗೆ ಮದ್ದು ಹಚ್ಚಲು ಬೆಂಗಳೂರಿಗೆ ಸುರ್ಜೇವಾಲ

ಮುಂದಿನ ಸುದ್ದಿ
Show comments