ತಮ್ಮ ಸಹೋದ್ಯೋಗಿ ವೈದ್ಯರಿಗೆ ಸೋಮವಾರ ಗುಂಡು ಹಾರಿಸಿ ಕೊಲ್ಲಲೆತ್ನಿಸಿದ್ದ ಡಾಕ್ಟರ್ ಶಶಿ ಕುಮಾರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ಸಂಜೆ ಹೈದರಾಬಾದ್ನ ಹಿಮಾಯತ್ ನಗರದ ಬಳಿ ವೈದ್ಯ ಶಶಿ ಕುಮಾರ್, ಡಾ.ಉದಯ್ ಕುಮಾರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಇಂದು ಅವರು ತಮ್ಮ ಗೆಳೆಯನೊಬ್ಬನ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವರದಿಗಳ ಪ್ರಕಾರ ಶಶಿಕುಮಾರ್ ಪರವಾನಿಗೆ ಪಡೆದುಕೊಂಡು ಇಟ್ಟುಕೊಂಡಿದ್ದ 32ಎಮ್ಎಮ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವೈದ್ಯ ಶಶಿ ಕುಮಾರ್ ಮತ್ತು ದಾಳಿಗೊಳಗಾದ ಡಾ.ಉದಯ್ ಹಾಗೂ ಡಾ.ಸಾಯಿಕುಮಾರ್ ಮತ್ತು ಕೆಲವು ಆನಿವಾಸಿ ಭಾರತೀಯರ ಪಾಲುದಾರಿಕೆಯಲ್ಲಿ ಇದೇ ಜನವರಿ 1ರಂದು 100 ಬೆಡ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಿದ್ದರು. ಆದರೆ ಉದಯ್ ಮತ್ತು ಸಾಯಿ ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದುಕೊಳ್ಳುತ್ತಿದ್ದ ಶಶಿಕುಮಾರ್ ಈ ಕುರಿತು ಚರ್ಚಿಸಲು ಅವರಿಬ್ಬರನ್ನು ಹಿಮಾಯತ್ ನಗರಕ್ಕೆ ಕರೆಸಿದ್ದರ ಮಾತು ವಿವಾದಕ್ಕೆ ಹೋಗಿ ಕೋಪದ ಆವೇಶದಲ್ಲಿ ಉದಯ್ ಮೇಲೆ ಗುಂಡು ಹಾರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.