Select Your Language

Notifications

webdunia
webdunia
webdunia
webdunia

ಹೈದ್ರಾಬಾದ್ ಪೊಲೀಸರ ಮುಂದೆ ಶರಣಾದ ಅಸಾದುದ್ದೀನ್ ಓವೈಸಿ

ಹೈದ್ರಾಬಾದ್ ಪೊಲೀಸರ ಮುಂದೆ ಶರಣಾದ ಅಸಾದುದ್ದೀನ್ ಓವೈಸಿ
ಹೈದ್ರಾಬಾದ್ , ಸೋಮವಾರ, 8 ಫೆಬ್ರವರಿ 2016 (15:42 IST)
ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರ ಮೇಲೆ ನಡೆಸಿದ ಹಲ್ಲೆಯಿಂದಾಗಿ ದೂರು ದಾಖಲಾಗಿದ್ದರಿಂದ ಆರೋಪಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇಂದು ಪೊಲೀಸರ ಮುಂದೆ ಶರಣಾಗಿದ್ದಾರೆ.
 
ಉತ್ತರಪ್ರದೇಶದ ಬಿಕಾಪುರ್ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸಿ ಫೈಜಾಬಾದ್‌ನಿಂದ ಹೈದ್ರಾಬಾದ್‌ಗೆ ಬಂದಿಳಿದ ಓವೈಸಿ, ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಡಿಸಿಪಿ ವಿ.ಸತ್ಯನಾರಾಯಣ ಮುಂದೆ ಶರಣಾದರು.
 
ಮುನ್ಸಿಪಾಲಿಟಿ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರಾದ ಮೊಹಮ್ಮದ್ ಅಲಿ ಶಬ್ಬೀರ್ ಮತ್ತು ಉತ್ತಮ ಕುಮಾರ್ ರೆಡ್ಡಿಯವರ ಮೇಲೆ ಹೈದ್ರಾಬಾದ್ ಸಂಸದ ಓವೈಸಿ ಮತ್ತು ಆತನ ಬೆಂಬಲಿಗರು ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿದೆ.
 
ಹೈದ್ರಾಬಾದ್ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆದರೆ, ಅವರೆಲ್ಲರು ಜಾಮೀನು ಪಡೆದು ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
 

Share this Story:

Follow Webdunia kannada