Webdunia - Bharat's app for daily news and videos

Install App

ಡ್ಯಾನ್ಸರ್ ಆಕಾಂಕ್ಷಿ ಯುವಕ ದೆಹಲಿ ದಾಳಿಯ ಸೂತ್ರಧಾರ ಹೇಗಾದ?

Webdunia
ಗುರುವಾರ, 5 ಮೇ 2016 (15:21 IST)
ವಿಧಿಯು ಅವನ ಜೀವನದಲ್ಲಿ ನಿರ್ಣಾಯಕ ತಿರುವು ನೀಡಿರದಿದ್ದರೆ  ಹಿಂಡನ್ ವಾಯುನೆಲೆ ಮೇಲಿನ ದಾಳಿಯಲ್ಲಿ ವಿಫಲಗೊಂಡ ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ದಾಳಿಯ ಮುಖ್ಯಶಂಕಿತ ಸಾಜಿದ್ ಡ್ಯಾನ್ಸರ್‌ ಆಗಿ ಜೀವನ ಸಾಗಿಸುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆಡಿಷನ್ ನೀಡಿದ್ದ ಸಾಜಿದ್ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ. ಅವನ ನೃತ್ಯದ ಭಂಗಿಗಳನ್ನು ಪಾರ್ಕ್‍ವೊಂದರಲ್ಲಿ ಅಭ್ಯಾಸ ಮಾಡುವಾಗ ಮೌಲಾನಾ ಸಂಧಿಸಿದ್ದ.
 
 ಧಾರ್ಮಿಕ ಗುರು ಸಂಗೀತವನ್ನು ನಿಲ್ಲಿಸಿ ಯುವಕ ತನ್ನ ಜೀವನ ವ್ಯರ್ಥ ಮಾಡುತ್ತಿದ್ದಾನೆಂದು ಟೀಕಿಸಿದ. ಸಂಗೀತ ಮತ್ತು ನೃತ್ಯದ ಜೀವನವು ನಿನ್ನನ್ನು ನರಕದಲ್ಲಿ ದೂಡುತ್ತದೆಂದು ಬೆದರಿಸಿದ.  ಸಾಜಿದ್‌ನನ್ನು ಬಂಧಿಸಿದ ತನಿಖೆದಾರರಿಗೆ ಅವನು ಮಂಗಳವಾರ ರಾತ್ರಿ ಬಾಯಿಬಿಟ್ಟಿದ್ದಾನೆ. ನನಗೆ ನೃತ್ಯದಲ್ಲೇ ದೊಡ್ಡ ಹೆಸರು ಮಾಡಬೇಕೆಂಬ ಅಭಿಲಾಷೆಯಿತ್ತು. ಆದರೆ ನನ್ನ ಜೀವನದ ನಿಜವಾದ ಉದ್ದೇಶವನ್ನು ಶೋಧಿಸುವಂತೆ ಅವನು ತಿಳಿಸಿ ಅದು ನಿನ್ನನ್ನು ಸ್ವರ್ಗಕ್ಕೆ ಒಯ್ಯುತ್ತದೆಂದು ಹೇಳಿದ್ದ. 
 
 ಮೌಲಾನಾ ಮತ್ತು ಸಾಜೀದ್ ಜತೆ ಕೆಲವು ಭೇಟಿಗಳ ಬಳಿಕ ಸಾಜಿದ್ ಸೈಬರ್ ಕೆಫೆಗಳಿಗೆ ಭೇಟಿ ನೀಡಿ ರಂಗೂನರ್.ಕಾಂ ಸೈಟಿಗೆ ಜೋತುಬಿದ್ದ. ಈ ಜಾಲತಾಣದ ಪ್ರಚೋದನಾಕಾರಿ ಅಂಶಗಳು ಕುರಾನ್ ಬಹುಭಾಗವು ಧರ್ಮ ರಕ್ಷಣೆಗಾಗಿ ಜನರನ್ನು ಕೊಲ್ಲಬೇಕೆಂದು ಬೋಧಿಸುತ್ತದೆಂದು ನಂಬುವಂತೆ ಮಾಡಿದವು. ಕೆಲವೇ ತಿಂಗಳಲ್ಲಿ ಸಾಜಿದ್ ಅತ್ಯಂತ ಮೂಲಭೂತವಾದಿ ಯುವಕನಾಗಿ ಪರಿವರ್ತನೆಗೊಂಡು ಜಿಹಾದ್ ಮಾರ್ಗವನ್ನು ಹಿಡಿಯಲು ಉದ್ದೇಶಿಸಿದ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments