ಡ್ಯಾನ್ಸರ್ ಆಕಾಂಕ್ಷಿ ಯುವಕ ದೆಹಲಿ ದಾಳಿಯ ಸೂತ್ರಧಾರ ಹೇಗಾದ?

Webdunia
ಗುರುವಾರ, 5 ಮೇ 2016 (15:21 IST)
ವಿಧಿಯು ಅವನ ಜೀವನದಲ್ಲಿ ನಿರ್ಣಾಯಕ ತಿರುವು ನೀಡಿರದಿದ್ದರೆ  ಹಿಂಡನ್ ವಾಯುನೆಲೆ ಮೇಲಿನ ದಾಳಿಯಲ್ಲಿ ವಿಫಲಗೊಂಡ ಜೈಷ್ ಎ ಮೊಹಮ್ಮದ್ ಭಯೋತ್ಪಾದಕ ದಾಳಿಯ ಮುಖ್ಯಶಂಕಿತ ಸಾಜಿದ್ ಡ್ಯಾನ್ಸರ್‌ ಆಗಿ ಜೀವನ ಸಾಗಿಸುತ್ತಿದ್ದ. ಸುಮಾರು 20 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಆಡಿಷನ್ ನೀಡಿದ್ದ ಸಾಜಿದ್ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದ. ಅವನ ನೃತ್ಯದ ಭಂಗಿಗಳನ್ನು ಪಾರ್ಕ್‍ವೊಂದರಲ್ಲಿ ಅಭ್ಯಾಸ ಮಾಡುವಾಗ ಮೌಲಾನಾ ಸಂಧಿಸಿದ್ದ.
 
 ಧಾರ್ಮಿಕ ಗುರು ಸಂಗೀತವನ್ನು ನಿಲ್ಲಿಸಿ ಯುವಕ ತನ್ನ ಜೀವನ ವ್ಯರ್ಥ ಮಾಡುತ್ತಿದ್ದಾನೆಂದು ಟೀಕಿಸಿದ. ಸಂಗೀತ ಮತ್ತು ನೃತ್ಯದ ಜೀವನವು ನಿನ್ನನ್ನು ನರಕದಲ್ಲಿ ದೂಡುತ್ತದೆಂದು ಬೆದರಿಸಿದ.  ಸಾಜಿದ್‌ನನ್ನು ಬಂಧಿಸಿದ ತನಿಖೆದಾರರಿಗೆ ಅವನು ಮಂಗಳವಾರ ರಾತ್ರಿ ಬಾಯಿಬಿಟ್ಟಿದ್ದಾನೆ. ನನಗೆ ನೃತ್ಯದಲ್ಲೇ ದೊಡ್ಡ ಹೆಸರು ಮಾಡಬೇಕೆಂಬ ಅಭಿಲಾಷೆಯಿತ್ತು. ಆದರೆ ನನ್ನ ಜೀವನದ ನಿಜವಾದ ಉದ್ದೇಶವನ್ನು ಶೋಧಿಸುವಂತೆ ಅವನು ತಿಳಿಸಿ ಅದು ನಿನ್ನನ್ನು ಸ್ವರ್ಗಕ್ಕೆ ಒಯ್ಯುತ್ತದೆಂದು ಹೇಳಿದ್ದ. 
 
 ಮೌಲಾನಾ ಮತ್ತು ಸಾಜೀದ್ ಜತೆ ಕೆಲವು ಭೇಟಿಗಳ ಬಳಿಕ ಸಾಜಿದ್ ಸೈಬರ್ ಕೆಫೆಗಳಿಗೆ ಭೇಟಿ ನೀಡಿ ರಂಗೂನರ್.ಕಾಂ ಸೈಟಿಗೆ ಜೋತುಬಿದ್ದ. ಈ ಜಾಲತಾಣದ ಪ್ರಚೋದನಾಕಾರಿ ಅಂಶಗಳು ಕುರಾನ್ ಬಹುಭಾಗವು ಧರ್ಮ ರಕ್ಷಣೆಗಾಗಿ ಜನರನ್ನು ಕೊಲ್ಲಬೇಕೆಂದು ಬೋಧಿಸುತ್ತದೆಂದು ನಂಬುವಂತೆ ಮಾಡಿದವು. ಕೆಲವೇ ತಿಂಗಳಲ್ಲಿ ಸಾಜಿದ್ ಅತ್ಯಂತ ಮೂಲಭೂತವಾದಿ ಯುವಕನಾಗಿ ಪರಿವರ್ತನೆಗೊಂಡು ಜಿಹಾದ್ ಮಾರ್ಗವನ್ನು ಹಿಡಿಯಲು ಉದ್ದೇಶಿಸಿದ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ವಿಳಂಬವಿಲ್ಲ, ನಿರ್ಲಕ್ಷ್ಯವಿಲ್ಲ, ಸಾಬೂಬುಗಳನ್ನು ಹೇಳಲಿಲ್ಲ

ಕಾಂಗ್ರೆಸ್ ಸಮಾವೇಶದಲ್ಲಿ ಮೋದಿ ಸಮಾಧಿ ಬಗ್ಗೆ ಮಾತು: ಸಂಸತ್ ನಲ್ಲಿ ಸೋನಿಯಾ ಕ್ಷಮೆಗೆ ಬಿಜೆಪಿ ಪಟ್ಟು

ವಿಚಾರಣೆ ಬಿಟ್ಟು ದೆಹಲಿಯಿಂದ ತುರ್ತಾಗಿ ರಾಜ್ಯಕ್ಕೆ ವಾಪಾಸ್ಸಾದ ಡಿಕೆ ಶಿವಕುಮಾರ್, ಕಾರಣ ಗೊತ್ತಾ

ಮುಂದಿನ ಸುದ್ದಿ
Show comments