Webdunia - Bharat's app for daily news and videos

Install App

ಬಿಜೆಪಿ-ಪಿಡಿಪಿ ಸರಕಾರ ರಚಿಸಲು ಸಿದ್ದವಾಗದಿದ್ರೆ ಚುನಾವಣೆ ಘೋಷಿಸಿ: ಫಾರೂಕ್ ಅಬ್ದುಲ್ಲಾ

Webdunia
ಸೋಮವಾರ, 1 ಫೆಬ್ರವರಿ 2016 (20:35 IST)
ಒಂದು ವೇಳೆ, ಬಿಜೆಪಿ ಮತ್ತು ಪಿಡಿಪಿ ಪಕ್ಷಗಳು ಸರಕಾರ ರಚಿಸಲು ಸಿದ್ದವಾಗದಿದ್ದಲ್ಲಿ ಹೊಸತಾಗಿ ಚುನಾವಣೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಪ್‌ರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.
 
ಪಿಡಿಪಿ ಮತ್ತು ಬಿಜೆಪಿಗೆ ಜನತೆ ಬಹುಮತ ನೀಡಿದ್ದಾರೆ. ಆದರೆ, ಎರಡೂ ಪಕ್ಷಗಳು ಸರಕಾರ ರಚಿಸಲು ನಿರಾಕರಿಸಿದಲ್ಲಿ ಜನತೆಯ ಬಳಿಗೆ ಹೋಗುವುದು ಸೂಕ್ತ. ಜನತೆ ಎನ್‌ಸಿ ಪಕ್ಷಕ್ಕೆ ಬಹುಮತ ನೀಡಿದಲ್ಲಿ ಸರಕಾರ ರಚಿಸಲು ಸಿದ್ದ ಎಂದು ಘೋಷಿಸಿದರು.
 
ಸರಕಾರ ರಚಿಸುವ ಕಸರತ್ತು ತೊಳಲಾಟದಲ್ಲಿರುವಂತೆಯೇ ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಲು ಸಿದ್ದ ಎಂದು ಅಬ್ದುಲ್ಲಾ ಬಹಿರಂಗ ಹೇಳಿಕೆ ನೀಡಿದ್ದಾರೆ.
 
ಜಮ್ಮು ಕಾಶ್ಮಿರದ ರಾಜ್ಯಪಾಲ ಎನ್‌.ಎನ್.ವೋಹ್ರಾ, ಸರಕಾರ ರಚಿಸುವ ಕುರಿತಂತೆ ಬಿಜೆಪಿ, ಪಿಡಿಪಿ ಪಕ್ಷಗಳು ತಮ್ಮ ನಿಲುವು ತಿಳಿಸುವಂತೆ ಆದೇಶಿಸರುವುದು ಸ್ವಾಗತಾರ್ಹ ನಿರ್ಧಾರ ಎಂದು ಬಣ್ಣಿಸಿದರು.
 
ರಾಜ್ಯಪಾಲರು ಉಭಯ ಪಕ್ಷಗಳ ಸಭೆ ಕರೆದು ಸರಕಾರ ರಚಿಸುವ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಸಂತಸ ತಂದಿದೆ. ಉಭಯ ಪಕ್ಷಗಳು ಸರಕಾರ ರಚಿಸುತ್ತವೆಯೋ ಅಥವಾ ಇಲ್ಲವೋ ಎನ್ನುವುದರಲ್ಲಿ ಒಂದಂತೂ ಸ್ಪಷ್ಟವಾಗಲಿದೆ ಎಂದು ನ್ಯಾಷನಲ್ ಕಾನ್ಪ್‌ರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments