Select Your Language

Notifications

webdunia
webdunia
webdunia
webdunia

ಹಿಂದೂಗಳೇ ನಿಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳಿ: ಸಾಧ್ವಿ ನಿರಂಜನ್ ಜ್ಯೋತಿ

ಹಿಂದೂಗಳೇ ನಿಮ್ಮ  ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳಿ:  ಸಾಧ್ವಿ ನಿರಂಜನ್ ಜ್ಯೋತಿ
ಅಲಪ್ಪುಝಾ , ಸೋಮವಾರ, 31 ಆಗಸ್ಟ್ 2015 (17:38 IST)
ಹಿಂದೂ ಸಮುದಾಯದವರು ತಮ್ಮ ಹೆಣ್ಣು ಮಕ್ಕಳನ್ನು ಕಾಪಾಡಿಕೊಳ್ಳಬೇಕಾದ ಅಗತ್ಯ ಎದುರಾಗಿದೆ ಎಂದು ಕೇಂದ್ರ ಆಹಾರ ಸಂರಕ್ಷಣೆ ಸಹಾಯಕ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಕರೆ ನೀಡಿದ್ದಾರೆ. 

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಮ್ ಸಂಸ್ಥೆ ಆಯೋಜಿಸಿದ್ದ  ಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು ಪೋಷಕರು ಮತ್ತು ಹೆಣ್ಣು ಮಕ್ಕಳು ಈ ನಿಟ್ಟಿನಲ್ಲಿ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡುವ ಮೂಲಕ ಹಿಂದೂ ಸಮುದಾಯದ ಹೆಣ್ಣು ಮಕ್ಕಳು ಅಪಾಯವನ್ನೆದುರಿಸುತ್ತಿದ್ದಾರೆ ಎಂಬ ಆತಂಕವನ್ನು ಹೊರ ಹಾಕಿದ್ದಾರೆ. 
 
"ಹಿಂದೂ ಧರ್ಮವನ್ನು ನಂಬದಿದ್ದವರ ಕೆಟ್ಟ ಪ್ರಭಾವದಿಂದ ನಿಮ್ಮ ಹೆಣ್ಣುಮಕ್ಕಳನ್ನು ರಕ್ಷಿಸುವ ಅಗತ್ಯವಿದೆ. ಇತ್ತೀಚಿನ ಜನಗಣತಿ ವರದಿ ಹಿಂದೂ ಸಮುದಾಯದಲ್ಲಾಗುತ್ತಿರುವ ಇಳಿಕೆ, ಅನ್ಯ ಧರ್ಮದಲ್ಲಾಗುತ್ತಿರುವ ಏರಿಕೆಯನ್ನು ಬಹಿರಂಗ ಪಡಿಸಿದೆ. ಇದು ಹಿಂದೂ ಸಮುದಾಯ ಒಂದುಗೂಡಬೇಕಾದ ಸಮಯ", ಎಂದು ಅವರು ಕರೆ ನೀಡಿದ್ದಾರೆ. 
 
"ಬಿಜೆಪಿ- ಎನ್‌ಡಿಎ ಸರ್ಕಾರ  ಧರ್ಮ-ಜಾತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಎಲ್ಲರ ಅಭಿವೃದ್ಧಿಗೆ ಕಟಿಬದ್ಧವಾಗಿದೆ. ಬ್ರಿಟಿಷ್ ಆಡಳಿತ ದೇಶದ ಪ್ರಜೆಗಳನ್ನು ಧರ್ಮದ ಆಧಾರದ ಮೇಲೆ ವಿಭಜಿಸಿತು", ಎಂದು ಅವರು ಹೇಳಿದ್ದಾರೆ. 

Share this Story:

Follow Webdunia kannada