ಮರುಮತಾಂತರದಲ್ಲಿ ತೊಡಗಿರುವ ಹಿಂದೂ ಸಂಘಟನೆಗಳು ಮತ್ತು ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯ್ಯಿದ್ ನಡುವೆ ಯಾವುದೇ ರೀತಿಯ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಹೋಲಿಕೆ ಮಾಡಿದ್ದಾರೆ. ಈ ಮೂಲಕ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದ್ದಾರೆ.
ಉಗ್ರ ಹಫೀಜ್ ಬಲವಂತದ ಮತಾಂತರದಲ್ಲಿ ತೊಡಗಿದ್ದಾನೆ ,ಅದೇ ರೀತಿಯ ಕೆಲಸವನ್ನು ಹಿಂದೂ ಸಂಘಟನೆಗಳು ಕೂಡ ನಡೆಸುತ್ತಿವೆ. ಆದ್ದರಿಂದ ಮೋಸ್ಟ್ ವಾಟೆಂಡ್ ಭಯೋತ್ಪಾದಕ ಹಫೀದ್ ಸಯ್ಯಿದ್ ಮತ್ತು ಹಿಂದೂ ಸಂಘಟನೆಗಳಿಗೂ ಯಾವುದೇ ಭೇದವಿಲ್ಲ. ಅವರು ಹಫೀಜ್ನ ಅವಳಿಗಳು ಎಂದು ತಿವಾರಿ ಹೇಳಿದ್ದಾರೆ.
ತಿವಾರಿಯವರ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರಕಾರ ಇದನ್ನು ಬಲವಾಗಿ ಖಂಡಿಸಿದೆ.
ಹಫೀಜ್ ಸಯೀದ್ ಜತೆ ಯಾರನ್ನು ಹೋಲಿಸುವುದು ಸಮ್ಮತವಲ್ಲ," ಎಂದು ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.