Webdunia - Bharat's app for daily news and videos

Install App

ಪರಸ್ಪರ ಮೂತ್ರಪಿಂಡ ವಿನಿಮಯ ಮಾಡಿಕೊಂಡ ಹಿಂದೂ-ಮುಸ್ಲಿಂ ದಂಪತಿಗಳು

Webdunia
ಮಂಗಳವಾರ, 23 ಮೇ 2017 (08:33 IST)
ನವದೆಹಲಿ: ಮಾನವೀಯತೆ ಎನ್ನುವುದರ ಮುಂದೆ, ಜಾತಿ, ಧರ್ಮ, ಲಿಂಗದ ಬೇಧವಿಲ್ಲ. ಒಂದು ಜೀವ ಉಳಿಸುವುದು ಪುಣ್ಯದ ಕೆಲಸ ಎನ್ನುವುದು ಎಲ್ಲಾ ಧರ್ಮದ ಸಾರ. ಇದನ್ನು ಈ ದಂಪತಿಗಳು ಮಾಡಿ ತೋರಿಸಿದ್ದಾರೆ.

 
ಉತ್ತರ ಪ್ರದೇಶದ ನೋಯ್ಡಾದಲ್ಲಿ ಇಂತಹದ್ದೊಂದು ಮಾನವೀಯತೆ ಮೆರೆದ ಘಟನೆ ನಡೆದಿದೆ. ಹಿಂದೂ ಧರ್ಮಕ್ಕೆ ಸೇರಿದ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ದಂಪತಿಯಲ್ಲಿ ಪತಿಗೆ ಕಿಡ್ನಿ ಕಸಿ ಮಾಡಬೇಕಾಗಿತ್ತು.

29 ವರ್ಷದ ಇಕ್ರಾಂ ಮತ್ತು 26 ವರ್ಷದ ರಾಹುಲ್ ವರಿಷ್ಠ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರಿಗೂ ದಾನಿಗಳ ಅಗತ್ಯವಿತ್ತು. ಇಕ್ರಾಂ ರಕ್ತದ ಗುಂಪು ಎ ಪೊಸಿಟಿವ್ ಆಗಿದ್ದರೆ ಪತ್ನಿ ರಾಝಿಯಾದ್ದು ಬಿ ಪೊಸಿಟಿವ್ ಆಗಿತ್ತು. ಅತ್ತ ರಾಹುಲ್ ರಕ್ತದ ಮಾದರಿ ಬಿ ಪೊಸಿಟಿವ್ ಮತ್ತು ಪತ್ನಿ ಪವಿತ್ರಾಳದ್ದು ಎ ಪೊಸಿಟಿವ್ ಆಗಿತ್ತು.

ಈ ಎರಡೂ ದಂಪತಿಗಳಿಗೆ ದಾನಿಗಳು ಸಿಗದೆ ನಿರಾಶೆಯಾಗಿತ್ತು. ಈ ಸಂದರ್ಭದಲ್ಲಿ ಅವರು ದಾಖಲಾಗಿದ್ದ ಜೆಪಿ ಆಸ್ಪತ್ರೆಯ ವೈದ್ಯರು ಎರಡೂ ಕುಟುಂಬದವರ ಜತೆ ಸಮಾಲೋಚನೆ ನಡೆಸಿ ಇಂತಹದ್ದೊಂದು ಐಡಿಯಾ ಕೊಟ್ಟರು.

ತಕ್ಷಣ ಇಬ್ಬರೂ ಪತ್ನಿಯರು ಇದಕ್ಕೆ ಒಪ್ಪಿಕೊಂಡರು. ಐದು ತಾಸುಗಳ ಶಸ್ತ್ರಚಿಕಿತ್ಸೆಯ ನಂತರ ಪತ್ನಿಯರ ಮೂತ್ರಪಿಂಡವನ್ನು ಪರಸ್ಪರ ದಾನ ಮಾಡಲಾಯಿತು. ಇದರಿಂದ ಸಮಾಜಕ್ಕೆ ಹೊಸ ಸಂದೇಶವನ್ನೇ ನೀಡಿದಂತಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್‌- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್‌ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ

ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್‌

ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ

Karnataka Weather: ಬೆಂಗಳೂರಿಗರಿಗೂ ಎಚ್ಚರ, ರಾಜ್ಯದ ಹವಾಮಾನ ಪರಿಸ್ಥಿತಿ ಹೇಗಿದೆ ನೋಡಿ

Vijay Rupani: ಕೊನೆಗೂ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

ಮುಂದಿನ ಸುದ್ದಿ
Show comments