ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಬಿಕ್ಕಟ್ಟು ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇಂದು ಪಕ್ಷದ ವೇದಿಕೆಯಲ್ಲಿಯೇ ಸಮಾಜವಾದಿ ಪಕ್ಷದ ಮುಖಂಡ ಶಿವಪಾಲ್ ಯಾದವ್ ಮತ್ತು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಧ್ಯೆ ಬಹಿರಂಗ ವಾಗ್ವಾದ ನಡೆಯಿತು.
ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪ್ರತಿಯೊಂದು ಜಿಲ್ಲೆಗೂ ಮೂರರಿಂದ ನಾಲ್ಕು ಬಾರಿ ಭೇಟಿ ನೀಡಿದ್ದೇನೆ ಎಂದು ಶಿವಪಾಲ್ ಹೇಳಿದಾಗ, ಸರಕಾರಿ ಹೆಲಿಕಾಪ್ಟರ್ ಬಳಸಿಕೊಂಡು ಪ್ರಯಾಣಿಸಿದ್ದೀರಾ ಎನ್ನುವ ಪ್ರತಿಕ್ರಿಯೆ ಸಭಿಕರಿಂದ ಕೇಳಿ ಬಂತು.
ಇದರಿಂದ ಆಕ್ರೋಶಗೊಂಡ ಶಿವಪಾಲ್, ಹೆಲಿಕಾಪ್ಟರ್ ತುಮ್ಹಾರೆ ಬಾಪ್ ಕಾ ಹೈ, ಸರಕಾರ ಮೇ ಮೈ ಮಂತ್ರಿ ಥಾ( ಹೆಲಿಕಾಪ್ಟರ್ ನಿಮ್ಮಪ್ಪಂದಾ, ಸರಕಾರದಲ್ಲಿ ಸಚಿವನಾಗಿದ್ದರಿಂದ ಹೆಲಿಕಾಪ್ಟರ್ ಬಳಸಿದ್ದೇನೆ ಎಂದು ತಿರುಗೇಟು ನೀಡಿದರು.
ಮುಖ್ಯಮಂತ್ರಿ ಬಳಿಯಿದ್ದ ಮೈಕ್ ಕಿತ್ತುಕೊಂಡ ಶಿವಪಾಲ್ ಯಾದವ್, ಕಠಿಣ ಪರಿಶ್ರಮದಿಂದ ಮತ್ತು ಮುಲಾಯಂ ಸಿಂಗ್ ಅವರ ನಾಯಕತ್ವದಿಂದ ಪಕ್ಷವನ್ನು ಕಟ್ಟಿದ್ದೇವೆಯೇ ಹೊರತು ನಿಮ್ಮ ಘೋಷಣೆಗಳಿಂದಲ್ಲ ಎಂದು ಅಖಿಲೇಶ್ ಬೆಂಬಲಿಗರಿಗೆ ತಿರುಗೇಟು ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ