Select Your Language

Notifications

webdunia
webdunia
webdunia
webdunia

ಬಿಸಿಲಿನ ರೌದ್ರ ನರ್ತನಕ್ಕೆ 700ಕ್ಕೂ ಹೆಚ್ಚು ಬಲಿ

ಬಿಸಿಲಿನ ರೌದ್ರ ನರ್ತನಕ್ಕೆ 700ಕ್ಕೂ ಹೆಚ್ಚು ಬಲಿ
ಹೈದರಾಬಾದ್ , ಮಂಗಳವಾರ, 26 ಮೇ 2015 (09:17 IST)
ಆಂಧ್ರ ಪದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ಝಳಕ್ಕೆ ಪ್ರಾಣ ತೆತ್ತವರ ಸಂಖ್ಯೆ 700 ಗಡಿ ದಾಟಿದೆ. ಇನ್ನೂ 2 ದಿನ  ಬಿಸಲಿನ ರೌದ್ರ ನರ್ತನ ಮುಂದುವರೆಯಲಿದೆ ಎಂದು ಆಂಧ್ರಪ್ರದೇಶದ ಮಹಾಮಾನ ಇಲಾಖೆ ತಿಳಿಸಿದೆ.

ಎರಡು ರಾಜ್ಯಗಳಲ್ಲಿ ಸತ್ತವರ ಸಂಖ್ಯೆ 725ಕ್ಕೆ ಏರಿದೆ. ಉಭಯ ರಾಜ್ಯಗಳಲ್ಲಿನ ತಾಪಮಾನವು 47 ಡಿಗ್ರಿ ಸೆಲ್ಸಿಯಸ್‌ಗೆ ಮುಟ್ಟಿದೆ. ಆಂಧ್ರಪ್ರದೇಶದಲ್ಲಿ ಬಿಸಿಲ ಹೊಡೆತಕ್ಕೆ ಬಲಿಯಾದವರ ಸಂಖ್ಯೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.
 
ಇದೇ ಪ್ರಥಮ ಬಾರಿಗೆ ಹಮಾಮಾನ ಇಲಾಖೆ ಬಿಸಿಲಿನ ಝಳಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ಮುಂಜಾನೆ ಬಿಸಿಲೇರಿದಾಗಿನಿಂದ ಸಂಜೆ 4 ಗಂಟೆಯವರೆಗೆ ಮನೆಯಿಂದ ಹೊರಗೆ ಬರದಿರಿ. ಅಂತಹ ಅಗತ್ಯ ಕಂಡುಬಂದರೆ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಹೊರಬರಬೇಕು ಎಂದು ಹವಾಮಾನ ಇಲಾಖೆ ಸೂಚಿಸಿದೆ.
 
ದುರ್ಮರಣವನ್ನಪ್ಪಿದವರಿಗೆ ಆಂಧ್ರ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. 
 
ತೆಲಂಗಾಣದ ವಿವಿಧೆಡೆ ವಾಹನಗಳು ಬೆಂಕಿಗೆ ಆಹುತಿಯಾಗಿರುವ ವರದಿಯಾಗಿದೆ. ಬಿಸಿಲ ತಾಪಕ್ಕೆ ಟ್ಯಾಂಕ್ ಹೊತ್ತಿ ಉರಿದು ವಾಹನಗಳು ಭಸ್ಮವಾಗಿವೆ.  

Share this Story:

Follow Webdunia kannada