Webdunia - Bharat's app for daily news and videos

Install App

ಪುತ್ರಿ ಸ್ವಾತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರು ಕಾಪಾಡಲಿಲ್ಲ: ಸ್ವಾತಿ ತಂದೆ

Webdunia
ಮಂಗಳವಾರ, 28 ಜೂನ್ 2016 (18:28 IST)
ನಗರದ ರೈಲ್ವೆ ನಿಲ್ದಾಣದಲ್ಲಿ ಪುತ್ರಿ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರೂ ಅವಳನ್ನು ಕಾಪಾಡುವ ಪ್ರಯತ್ನ ಮಾಡಲಿಲ್ಲ ಎಂದು ಹತ್ಯೆಯಾದ ಇನ್ಫೋಸಿಸ್ ಮಹಿಳಾ ಉದ್ಯೋಗಿ ಸ್ವಾತಿ ತಂದೆ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
 
ಹತ್ಯೆಯಾಗುತ್ತಿರುವಾಗ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನಿಂತಿದ್ದವರಿಂದ ನಮ್ಮ ಮಗಳನ್ನು ಜೀವಂತವಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಸ್ವಾತಿ ತಂದೆ ಸಂತಾನಾ ಗೋಪಾಲಾ ಕೃಷ್ಣನ್ ಹೇಳಿದ್ದಾರೆ.  
 
ಯುವತಿಯ ಹತ್ಯೆಯಾಗುತ್ತಿರುವುದು ಕಂಡ ಪ್ರಯಾಣಿಕರು ರೈಲು ನಿಲ್ದಾಣದಿಂದ ಹೊರಗಡೆ ಓಡಿ ಹೋಗಿದ್ದಲ್ಲದೇ ಕೆಲ ನಿಮಿಷಗಳ ನಂತರ ಬಂದ ಮತ್ತೊಂದು ರೈಲು ಹತ್ತಿ ಪರಾರಿಯಾಗಿದ್ದರು.
 
ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸ್ವಾತಿ ಉದ್ಯೋಗಕ್ಕಾಗಿ ತೆರಳಲು ರೈಲಿಗಾಗಿ ಕಾಯುತ್ತಾ ನಿಂತಿರುವಾಗ ಹತ್ಯೆಯಂತಹ ಘಟನೆ ನಡೆದಿತ್ತು.ಸ್ವಾತಿ ತುಂಬಾ ಉದಾರ ಮನೋಭಾವದವಳಾಗಿದ್ದರಿಂದ ಅವಳ ದೇಹದ ಭಾಗಗಳನ್ನು ದಾನವಾಗಿ ಆಸ್ಪತ್ರೆಗೆ ದಾನ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. 
 
ಒಂದು ವೇಳೆ, ಯಾರಾದರೂ ಹಲ್ಲೆಯಾಗುವುದನ್ನು ತಡೆಯುತ್ತಿದ್ದರೆ ಸ್ವಾತಿ ಜೀವಂತವಾಗಿ ಉಳಿಯಬಹುದಾಗಿತ್ತು. ಕೇವಲ ಸ್ವಾರ್ಥಕ್ಕಾಗಿ ಅಥವಾ ಇತರ ಕಾರಣಕ್ಕಾಗಿ ಮೌನವಾಗಿದ್ದುದು ಸರಿಯಲ್ಲ ಎಂದು ಹೇಳಿದ್ದಾರೆ.
 
ಇನ್ಫೋಸಿಸ್ ಉದ್ಯೋಗಿಯಾದ ಸ್ವಾತಿ ನುಂಗಂಬಾಕಂ ರೈಲ್ವೆ ನಿಲ್ದಾಣದಲ್ಲಿ ಹತ್ಯೆಯಾದ ಘಟನೆಯನ್ನು ನಾಗರಿಕರು ಮತ್ತು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments