Webdunia - Bharat's app for daily news and videos

Install App

ಆಟದ ಸಮಯ ಕಡಿತಗೊಳಿಸಿದ ಅಜ್ಜಿಯ ವಿರುದ್ಧ ಬಾಲಕನಿಂದ ಪೊಲೀಸರಿಗೆ ದೂರು

Webdunia
ಭಾನುವಾರ, 25 ಡಿಸೆಂಬರ್ 2016 (12:02 IST)
ಚಿಕ್ಕ ಬಾಲಕನೊಬ್ಬ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಬೇಕಾಗಿದೆ ಎಂದು ಹೇಳಿದಾಗ ಪೊಲೀಸರಿಗೆ ಅಚ್ಚರಿ ಮತ್ತು ಆಘಾತ ಕಾದಿತ್ತು. ಅಜ್ಜಿ ಆಟದ ಸಮಯ ಕಡಿತಗೊಳಿಸಿದ್ದರಿಂದ ಆಕೆಯ ವಿರುದ್ಧ ದೂರು ನೀಡಲು ಬಂದಿದ್ದೇನೆ ಎಂದಾಗ ಪೊಲೀಸರಿಗೆ ಸುಸ್ತೋ ಸುಸ್ತು.
 
ನಗರದ ಎಸ್‌ಆರ್ ನಗರ್ ಪೊಲೀಸ್ ಠಾಣೆಯಲ್ಲಿ ದೈನಂದಿನ ಕರ್ತವ್ಯವನ್ನು ಅಂತ್ಯಗೊಳಿಸಿ ಸ್ವಲ್ಪ ವಿಶ್ರಾಂತಿ ಪಡೆಯಬೇಕು ಎನ್ನುವಾಗಲೇ ಬಾಲಕನ ಪ್ರವೇಶವಾಗಿದೆ. ಬಾಲಕನ ದೂರು ಕೇಳಿದ ನಂತರ ಏನು ಮಾಡಬೇಕು ಎನ್ನುವುದು ತೋಚದೆ ಕಂಗಾಲಾಗಿದ್ದಾರೆ.
 
ಬಾಲಕನ ದೂರು ಕೇಳಿದ ಪೊಲೀಸರು ಆತನ ತಂದೆ ತಾಯಿಗೆ ಕರೆ ಮಾಡಿ ಠಾಣೆಗೆ ಕರೆಸಿಕೊಂಡು ಬುದ್ದಿ ಮಾತು ಹೇಳಿದ್ದಾರೆ.ಟಿವಿ ಸೀರಿಯಲ್‌ಗಳಿಂದ ಪ್ರೇರಣೆಗೊಂಡು ಬಾಲಕ ಪೊಲೀಸ್ ಠಾಣೆಗೆ ಬಂದಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
 
ಪೊಲೀಸ್ ಠಾಣೆಗೆ ಬಂದ ಬಾಲಕನಿಗೆ ಕೆಲ ಚಾಕೋಲೇಟ್‌ಗಳನ್ನು ಕೊಟ್ಟ ನಂತರ ಅಜ್ಜಿಯ ವಿರುದ್ಧದ ದೂರನ್ನು ಬಾಲಕ ಹಿಂಪಡೆದಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments