Select Your Language

Notifications

webdunia
webdunia
webdunia
webdunia

ಮಾನನಷ್ಟ ಮೊಕದ್ದಮೆ: ಸ್ಮೃತಿ ಇರಾನಿ ವ್ಯಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿದ ಕೋರ್ಟ್

ಮಾನನಷ್ಟ ಮೊಕದ್ದಮೆ: ಸ್ಮೃತಿ ಇರಾನಿ ವ್ಯಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿದ ಕೋರ್ಟ್
ನವದೆಹಲಿ , ಬುಧವಾರ, 29 ಜುಲೈ 2015 (15:41 IST)
ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ದಾಖಲಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಸೃತಿ ಇರಾನಿ ವ್ಯಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.  
 
ಸ್ಮೃತಿ ಇರಾನಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕೈಟ್,ಸ್ಮೃತಿ ಇರಾನಿಗೆ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡಿದ್ದಾರೆ.
 
ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಸಲ್ಲಿಸಿದ ದೂರನ್ನು ವಜಾಗೊಳಿಸುವಂತೆ ಕೋರಿ ಸ್ಮತಿ ಇರಾನಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆಗಸ್ಟ್ 13 ರಂದು ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.   
 
ವಿಶೇಷ ಅಭಿಯೋಜಕರಾದ ಮಣೀಂದರ್ ಸಿಂಗ್ ಮತ್ತು ವಕೀಲರಾದ ಅನಿಲ್ ಸೋನಿ ಇರಾನಿ ಪರ ವಾದಿಸುತ್ತಿದ್ದಾರೆ.
 
ಕಳೆದ 2012ರ ಡಿಸೆಂಬರ್ ತಿಂಗಳಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಬಹಿರಂಗವಾದಾಗ ಬಿಜೆಪಿ ನಾಯಕ ಸ್ಮೃತಿ ಇರಾನಿ ಟೆಲಿವಿಜನ್ ಚಾನೆಲ್‌ನಲ್ಲಿ ಮಾನಹಾನಿಯಾಗುವಂತಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
 

Share this Story:

Follow Webdunia kannada