Webdunia - Bharat's app for daily news and videos

Install App

ನಾನೇನು ತಪ್ಪು ಮಾಡಿಲ್ಲ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ: ಶಶಿ ತರೂರ್

Webdunia
ಬುಧವಾರ, 28 ಜನವರಿ 2015 (18:18 IST)
ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಸಂಬಂಧಿಸಿದಂತೆ ತನಿಖೆಯ ಸುಳಿಯಲ್ಲಿ ಸಿಲುಕಿ ಕೊಂಡಿರುವ ಕಾಂಗ್ರೆಸ್ ಸಂಸದ ತರೂರ್ ಮಾಧ್ಯಮಗಳ ವಿರುದ್ಧ ಮತ್ತು ತಮ್ಮ ರಾಜೀನಾಮೆಗೆ ಒತ್ತಾಯಿಸುತ್ತಿರುವ ತಮ್ಮದೇ ಪಕ್ಷದ ಕೆಲ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. 
 
ದೇಶದ ಕಾನೂನನ್ನು ಹೊರತು ಪಡಿಸಿ ಇನ್ಯಾರು ಕೂಡ ನನ್ನ ಹಣೆಬರಹವನ್ನು ಬರೆಯಲಾರರು ಎಂದು ಅವರು ಹೇಳಿದ್ದಾರೆ. 
 
ನಾವು ನಮ್ಮ ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಹೊಂದಿದ್ದೇವೆ. ಸಮಾಜಕ್ಕೆ ಸಂಬಂಧಿಸಿದಂತೆ ಕೂಡ ನಿಯಮಗಳನ್ನು ಹೊಂದಿದ್ದೇವೆ. ನಾನು ಕಾನೂನಿಗೆ ಗೌರವ ನೀಡುತ್ತೇನೆ. ಈ ಮೊದಲು ಸಹ ನಾನು ಅದನ್ನೇ ಮಾಡಿದ್ದೇನೆ ಎಂದಿದ್ದಾರೆ ತರೂರ್. 
 
ರಾಜಕಾರಣಿಯಾಗಿ ತಮ್ಮ ವೃತ್ತಿಜೀವನ ಕಳಂಕವಿಲ್ಲದು ಎಂದಿರುವ ತರೂರ್ ತಮ್ಮ ರಾಜೀನಾಮೆಗೆ ಕೇಳಿಬರುತ್ತಿರುವ ಒತ್ತಾಯ 'ಅಸಂಬದ್ಧ' ಎಂದಿದ್ದಾರೆ. 
 
ಹಿರಿಯ ನಾಯಕ ಪಿಸಿ ಚಾಕೋ ಸೇರಿದಂತೆ ತಮ್ಮದೇ ಪಕ್ಷದ, ಹಲವರು ತಮ್ಮನ್ನು ಸಂಸದನ ಸ್ಥಾನದಿಂದ ಕೆಳಗಿಳಿಯುವಂತೆ ಬೇಡಿಕೆ ಇಡುತ್ತಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅವರಿಂದ ಸ್ಪಷ್ಟನೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments