Webdunia - Bharat's app for daily news and videos

Install App

3 ಕೋಟಿ ಮನೆ ಒಡತಿಯಾದರೂ ಬೀದಿಬದಿಯಲ್ಲಿ ಫಾಸ್ಟ್ ಫುಡ್ ಮಾರಾಟ

Webdunia
ಶುಕ್ರವಾರ, 5 ಆಗಸ್ಟ್ 2016 (17:33 IST)
ಇದು ಸ್ವಾವಲಂಬನೆಯಿಂದ ಬದುಕುವ ಹೆಣ್ಣಿನ ಕಥೆ. ಕೋಟ್ಯಾಧೀಶ ಕುಟುಂಬದ ಹಿನ್ನೆಲೆ ಇದ್ದರೂ ಫಾಸ್ಟ್ ಫುಡ್ ಮಾರುತ್ತ ಸರಳ ಜೀವನವನ್ನು ನಡೆಸುವ 34 ವರ್ಷದ ಮಹಿಳೆಯ ಪ್ರೇರಣಾದಾಯಕ ಕಥೆ.
ಗುರ್ಗಾಂವ್ ನಿವಾಸಿಯಾಗಿರುವ ಊರ್ವಶಿ ಯಾದವ್ (34) ಈ ಹಿಂದೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. 3 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುವ ಅವರ ಬಳಿ ದುಬಾರಿ ಬೆಲೆಯ ಎಸ್.ಯು.ವಿ. ಕಾರು ಕೂಡ ಇದೆ.ಆದರೆ ಆಕೆ ಬೀದಿ ಬದಿಯಲ್ಲಿ ಚೋಲೆ ಕುಲ್ಚೆ ಮಾರುತ್ತಾಳೆ. ತನ್ನ ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಇದು ಅಗತ್ಯ ಎನ್ನುತ್ತಾಳೆ ಆಕೆ.

ಊರ್ವಶಿ ಯಾದವ್ 45 ದಿನಗಳಿಂದ ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಮಾರಾಟ ಮಾಡಲು ಪ್ರಾರಂಭಿಸಿದ್ದಾಳೆ. ಕಳೆದ 6 ವರ್ಷಗಳಲ್ಲಿ ಎರಡನೆಯ ಬಾರಿಗೆ ಆಕೆಯ ಪತಿ ಅಪಘಾತಕ್ಕೀಡಾಗಿದ್ದು ಹಾಸಿಗೆ ಹಿಡಿದಿದ್ದಾರೆ. ಕನ್ ಸ್ಟ್ರಕ್ಷನ್ ಕಂಪನಿಯಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಪತಿ ಅಮಿತ್(37) ಯಾದವ್ ಕೆಲಸ ಮಾಡಲಾಗದಿರುವುದರಿಂದ ಊರ್ವಶಿ ತಾವೇ ಕುಟುಂಬವನ್ನು ನಿರ್ವಹಿಸಲು ನಿಂತಿದ್ದಾರೆ .ಊರ್ವಶಿ ಮಾವ ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಆಗಿದ್ದಾರೆ.

12 ವರ್ಷದ ಮಗಳು ಹಾಗೂ 7 ವರ್ಷದ ಮಗನ ಭವಿಷ್ಯಕ್ಕಾಗಿ ಇದು ಅನಿವಾರ್ಯ ಎನ್ನುತ್ತಾಳೆ ಊರ್ವಶಿ.  ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಊರ್ವಶಿ ದಿನಕ್ಕೆ ಎರಡೂವರೆಯಿಂದ ಮೂರು ಸಾವಿರ ರೂಪಾಯಿ ದುಡಿಯುತ್ತಿದ್ದಾರೆ.

ನಾವೀಗ ಆರ್ಥಿಕವಾಗಿ ದುಃಸ್ಥಿತಿಯಲ್ಲಿ ಇಲ್ಲ, ನಿಜ. ಆದರೆ ಭವಿಷ್ಯದಲ್ಲಿ ರಿಸ್ಕ್ ತೆಗೆದುಕೊಳ್ಳಲು ನಾನು ಬಯಸುವುದಿಲ್ಲ. ಕಾಲ ಕೆಡುವುದಕ್ಕಿಂತ ಮೊದಲು ನಾನು ಭವಿಷ್ಯದ ಹಿತ ದೃಷ್ಟಿಗೆ ನಾನು ಚಿಂತಿಸಲೇ ಬೇಕಿದೆ.ಶಿಕ್ಷಕಿಯಾಗಿ ಕೆಲಸ ಮಾಡಿ ಸಾಕಷ್ಟು ಹಣವನ್ನು ಉಳಿತಾಯ ಮಾಡಲಾಗದು ಎಂದು ಅರಿವಾಗಿ  ನಾನು ಈ ಅಂಗಡಿಯನ್ನಿಟ್ಟುಕೊಂಡಿದ್ದೇನೆ. ಅಡುಗೆ ಮಾಡುವುದು ನನಗೆ ತುಂಬಾ ಇಷ್ಟ. ಹೀಗಾಗಿ ಇದರಲ್ಲಿ ಹಣ ಹೂಡಿದ್ದೇನೆ ಎಂದಾಕೆ ಹೇಳುತ್ತಾಳೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಎರಡು ದಿನ ಭಾರೀ ಮಳೆ, ಕರಾವಳಿಗೆ ಇಂದೂ ಮಳೆಯಿರುತ್ತಾ ನೋಡಿ

ಸಂಸತ್‌ ಕ್ಯಾಂಟೀನ್‌ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಮೆನುವಿನಲ್ಲಿ ಭಾರೀ ಬದಲಾವಣೆ ತಂದ ಸ್ಪೀಕರ್‌

ಒಡಿಶಾ, ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪ್ರತಿಭಟನಕಾರರನ್ನು ಚದುರಿಸಲು ಜಲಫಿರಂಗಿ ಪ್ರಯೋಗ

ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ: ನಾರಾಯಣ ಮೂರ್ತಿ

Karnataka Rain Alert: ಮುಂದಿನ 7 ದಿನಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ

ಮುಂದಿನ ಸುದ್ದಿ
Show comments