Webdunia - Bharat's app for daily news and videos

Install App

ಗುರುದಾಸಪುರ ದಾಳಿ: ಉಗ್ರರು ಬಂದಿದ್ದು ಪಾಕ್‌ನಿಂದ

Webdunia
ಬುಧವಾರ, 29 ಜುಲೈ 2015 (17:10 IST)
ಪಂಜಾಬ್‌ನ  ಗುರುದಾಸಪುರ ಜಿಲ್ಲೆಯ ದೀನಾನಗರದಲ್ಲಿ ದಾಳಿ ನಡೆಸಿದ್ದ  ಮೂವರು ಶಂಕಿತ ಉಗ್ರರು ಪಾಕಿಸ್ತಾನದಿಂದ ಬಂದಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

 ಜುಲೈ 26-27ರ ರಾತ್ರಿ ರಾವಿ ನದಿ ದಾಟಿ ಉಗ್ರರು ಭಾರತವನ್ನು ಪ್ರವೇಶಿಸಿದ್ದರು ಎಂದು ತಿಳಿದು ಬಂದಿದ್ದು ಅವರು ಅನೇಕ ಪ್ರದೇಶಗಳಲ್ಲಿ ದಾಳಿ ನಡೆಸುವ ಯೋಜನೆಯನ್ನು ಹೊಂದಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಸೇನಾ ಸಮವಸ್ತ್ರದಲ್ಲಿದ್ದ ಭಾರೀ  ಶಸ್ತ್ರಸಜ್ಜಿತ ಮೂವರು ಉಗ್ರರು ಸೋಮವಾರ ಬೆಳಗಿನ ಜಾವ 4.55ರ ಸುಮಾರಿಗೆ ರಸ್ತೆಯಲ್ಲಿ ಓಡಾಡುತ್ತಿದ್ದ ದೃಶ್ಯಗಳು ಸಹ ಪೊಲೀಸರಿಗೆ ಸಿಕ್ಕಿವೆ.
 
ಮೃತ ಭಯೋತ್ಪಾದಕರು ಇಟ್ಟುಕೊಂಡಿದ್ದ 2 ಜಿಪಿಎಸ್‌ ಮಶಿನ್‌ನ್ನು ವಶಪಡಿಸಿಕೊಂಡ ಪೊಲೀಸರಿಗೆ ಜುಲೈ 21 ರಂದು ಈ ಯಂತ್ರದಲ್ಲಿ ಸಾಗಬೇಕಾದ ದಾರಿ, ಗುರಿಗಳ ವಿವರಗಳನ್ನು ನಮೂದಿಸಿರುವುದು ಗೊತ್ತಾಗಿದೆ.
 
"ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಜಿಪಿಎಸ್)ನಿಂದ ಸಂಗ್ರಹಿಸಿರುವ ಡೇಟಾ ಪ್ರಕಾರ ಮೂವರು ಭಯೋತ್ಪಾದಕರು, ಭಾನುವಾರ ಮತ್ತು ಸೋಮವಾರದ ನಡುವಿನ ರಾತ್ರಿ ಪಾಕಿಸ್ತಾನದ ಶಕರ್ಗಢದ ಘಾರೋಟ್‌ನಿಂದ ಅಂತರಾಷ್ಟ್ರೀಯ ಗಡಿಯಾದ ಪಠಾನ್ಕೋಟ್‌ನ ಬಮಿಯಾಲ್ ನಗರದ ಮೂಲಕ ಭಾರತಕ್ಕೆ ನುಸುಳಿದ್ದರು ಎಂದು ಮೂಲಗಳು ತಿಳಿಸಿವೆ. 
 
ಈ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆ  ಅಷ್ಟೊಂದು ಪರಿಣಾಮಕಾರಿಯಾಗಿಲ್ಲವಾದ್ದರಿಂದ ಸುಲಭವಾಗಿ ಉಗ್ರರು ಅಮೃತಸರ್- ಜಮ್ಮ ಹೆದ್ದಾರಿಯತ್ತ ನಡೆದು ಬಂದರು ಎಂದು ಮಾಹಿತಿ ಲಭಿಸಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments