Webdunia - Bharat's app for daily news and videos

Install App

ಹಾಡಹಗಲೇ ರಿವಾಲ್ವರ್‌ನಿಂದ ಬೆದರಿಸಿ ಲಾಲು ಯಾದವ್ ಅಳಿಯನ ಕಾರು ಕಳ್ಳತನ

Webdunia
ಬುಧವಾರ, 3 ಫೆಬ್ರವರಿ 2016 (21:38 IST)
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ ಅಳಿಯ ವಿನೀತ್ ಯಾದವ್‌ರನ್ನು ಇಬ್ಬರು ವ್ಯಕ್ತಿಗಳು ರಿವಾಲ್ವರ್‌ನಿಂದ ಬೆದರಿಸಿ ಸುವಿ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಸಿಕಿಂದರ್‌ಪುರ್ ಮೆಟ್ರೋ ರೈಲ್ವೆ ನಿಲ್ದಾಣದ ಬಳಿ ಇಂದು ಸಂಜೆ ನಡೆದಿದೆ.
  
ಲಾಲು ಪ್ರಸಾದ್ ಯಾದವ್‌ರ ಐದನೇ ಪುತ್ರಿಯಾದ ಹೇಮಾರನ್ನು ವಿವಾಹವಾದ ವಿನೀತ್ ಯಾದವ್, ಇಂದು ಸಂಜೆ ವೈಯಕ್ತಿಕ ಕೆಲಸದ ನಿಮಿತ್ಯ ಸಿಕಿಂದರ್‌ಪುರ್ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಸುಮಾರು 2.30 ಗಂಟೆಗೆ ಆಗಮಿಸಿದ್ದರು. ಕಾರು ಚಾಲಕ ವಾಹನವನ್ನು ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದನು ಎನ್ನಲಾಗಿದೆ. 
 
ಸಂಜೆ 4 ಗಂಟೆ ಸುಮಾರಿಗೆ ಇಬ್ಬರು ವ್ಯಕ್ತಿಗಳು ಬಂದು ಒತ್ತಾಯಪೂರ್ವಕವಾಗಿ ಕಾರು ಚಾಲಕನನ್ನು ಹೊರಗೆಳೆದು ಥಳಿಸಿದ್ದಲ್ಲದೇ ರಿವಾಲ್ವರ್‌ನಿಂದ ಬೆದರಿಸಿ ಸುವಿ ಕಾರು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
 
ಸ್ಥಳಕ್ಕೆ ಬಂದ ವಿನೀತ್ ಯಾದವ್, ಘಟನೆಯ ಬಗ್ಗೆ ಕಾರು ಚಾಲಕನಿಂದ ಮಾಹಿತಿ ಪಡೆದು ಪೊಲೀಸ್ ಠಾಣೆಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.  
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments