Webdunia - Bharat's app for daily news and videos

Install App

ಹತ್ಯೆ ಪ್ರಕರಣ: ಗುಜರಾತ್ ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ

Webdunia
ಶುಕ್ರವಾರ, 11 ಆಗಸ್ಟ್ 2017 (19:30 IST)
ಕಳೆದ 2004ರಲ್ಲಿ ಹತ್ಯೆಯಾದ ವ್ಯಕ್ತಿಯೊಬ್ಬನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌರಾಷ್ಟ್ರದ ಗೊಂಡಲ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಜೈರಾಜ್ ಸಿಂಗ್ ಜಡೇಜಾಗೆ ಗುಜರಾತ್ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
 
ನ್ಯಾಯಮೂರ್ತಿ ಅಕಿಲ್ ಕುರೇಶಿ ಮತ್ತು ಬಿ.ಎನ್. ಬೈರೆನ್ ವೈಷ್ಣವ್ ನೇತೃತ್ವದ ನ್ಯಾಯಪೀಠ,  ಜಡೇಜಾ ಮತ್ತು ಅವರ ಇಬ್ಬರು ಸಹವರ್ತಿಗಳು ಅಮರ್‌ಜಿತ್ ಸಿನ್ಹಾ ಜಡೇಜಾ ಮತ್ತು ಮಹೇನ್ರಾಸಿನ್ಹಾ ಅಲಿಯಾಸ್ ಭಗತ್ ರಾಣಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟಂಬರ್ 30 ರೊಳಗೆ ಆರೋಪಿಗಳು ಪೊಲೀಸರಿಗೆ ಶರಣಾಗುವಂತೆ ಆದೇಶಿಸಿದ್ದಾರೆ.
 
ಕಳೆದ 1998 ರಲ್ಲಿ ಗೊಂಡಾಲ್ ವಿಧಾನಸಭಾ ಕ್ಷೇತ್ರದಿಂದ ಜಡೇಜಾ ಮೊದಲ ಬಾರಿಗೆ ಶಾಸಕರಾಗಿದ್ದರು. ನಂತರ 2002ರಲ್ಲಿ ಶಾಸಕರಾಗಿ ಮುಂದುವರೆದಿದ್ದರು. ಸುಪ್ರೀಂಕೋರ್ಟ್‌ನಿಂದ ನಿರಾಳತೆ ಪಡೆಯದಿದ್ದಲ್ಲಿ ಶಾಸಕ ಸ್ಥಾನವನ್ನು ಕೋರ್ಟ್ ರದ್ದುಗೊಳಿಸಬಹುದಾಗಿದೆ.
 
2004ರಲ್ಲಿ ಭೂ ವಿವಾದ ಕುರಿತಂತೆ ಬಿಜೆಪಿ ಶಾಸಕ ಜೈರಾಜ್ ಸಿಂಗ್, ವೀನು ಸಿಂಘಾಲಾ ಎಂಬಾತನನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದನು. ಆದರೆ, ಆರೋಪ ಸಾಬೀತಾಗದೆ ನಿರಪರಾಧಿಯಾಗಿ ಹೊರಬಂದಿದ್ದನು. ಆದರೆ ನಿಲೇಶ್ ಹತ್ಯೆಯಲ್ಲಿ ಜೈರಾಜ್ ಸಿಂಗ್ ಅಪರಾಧಿಯಾಗಿರುವುದು ಸಾಬೀತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments