Webdunia - Bharat's app for daily news and videos

Install App

ತಿರುಪತಿ: ಪ್ರಸಾದಂ ಮತ್ತು ಭಕ್ತರ ತಲೆಕೂದಲಿಗೆ ಜಿಎಸ್ ಟಿ ವಿನಾಯಿತಿ

Webdunia
ಮಂಗಳವಾರ, 20 ಜೂನ್ 2017 (15:16 IST)
ನವದೆಹಲಿ: ವಿಶ್ವ ವಿಖ್ಯಾತ ತಿರುಪತಿ ದೇವಸ್ಥಾನದ ಪ್ರಸಾದ ಮತ್ತು ಭಕ್ತರು ಮುಡಿ ರೂಪದಲ್ಲಿ ಒಪ್ಪಿಸಿದ ತಲೆ ಕೂದಲನ್ನು ತೆರಿಗೆಯಿಂದ ವಿನಾಯಿತಿಗೊಳಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿ(ಜಿಎಸ್‌ಟಿ) ಅನುಮತಿ ನೀಡಿದೆ. 
 
ಆಂಧ್ರ ಪ್ರದೇಶ ಸಚಿವ ವೈ ರಾಮಕೃಷ್ಣುಡು ದೆಹಲಿಯಲ್ಲಿ ನಡೆದಿದ್ದ 17ನೇ ಜಿಎಸ್‌ಟಿ ಮಂಡಲಿ ಸಭೆಯಲ್ಲಿ ಈ ಪ್ರಸ್ತಾವವನ್ನು ಮಂಡಿಸಿದ್ದರು. ಜಿಎಸ್‌ಟಿ ಮಂಡಳಿಯು ಅವರ ಪ್ರಸ್ತಾವವನ್ನು ಪರಿಗಣಿಸಿ ತಿರುಪತಿ ಪ್ರಸಾದ ಮತ್ತು ಭಕ್ತರು ಒಪ್ಪಿಸುವ ತಲೆ ಕೂದಲನ್ನು ತೆರಿಗೆಯಿಂದ ವಿನಾಯಿತಿಗೊಳಿದೆ.
 
ತಿರುಪತಿ ದೇವಳವನ್ನು ನಡೆಸುತ್ತಿರುವ ತಿರುಪತಿ ಟ್ರಸ್ಟ್‌ ಅತ್ಯಂತ ಘನವೆತ್ತ ಧಾರ್ಮಿಕ ಟ್ರಸ್ಟ್‌ ಆಗಿದ್ದು ದಿನಂಪ್ರತಿ ಲಕ್ಷಾಂತರ ಭಕ್ತರಿಗೆ ಅದು ಸೇವೆ ನೀಡುತ್ತಿದೆ ಎಂದು ಮಂಡಳಿಯ ಮುಂದೆ ಹೇಳಿಕೆ ನೀಡಲಾಗಿತ್ತು. ತಿರುಪತಿ ಪ್ರಸಾದ ಮತ್ತು ಭಕ್ತರ ತಲೆಕೂದಲಿಗೆ ತೆರಿಗೆ ವಿನಾಯಿತಿ ನೀಡಿರುವ ಸುಲಲಿತವಾಗಿ ವಹಿವಾಟು ನಡೆಸುವುದಕ್ಕೆ ಅನುಕೂಲ ಮಾಡಿಕೊಟ್ಟಿರುವುದಕ್ಕೆ ಜಿಎಸ್‌ಟಿ ಮಂಡಳಿಯ ಕ್ರಮವನ್ನು ಆಂಧ್ರ ಪ್ರದೇಶ ಸರಕಾರ ಸ್ವಾಗತಿಸಿದೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments