Webdunia - Bharat's app for daily news and videos

Install App

ನೀವೆಷ್ಟು ತಿನ್ನಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ!

Webdunia
ಬುಧವಾರ, 12 ಏಪ್ರಿಲ್ 2017 (08:35 IST)
ನವದೆಹಲಿ: ಇನ್ನು ಮುಂದೆ ಹೋಟೆಲ್ ಗೆ ಹೋಗಿ ಬೇಕಾಬಿಟ್ಟಿ ಆಹಾರ ವೇಸ್ಟ್ ಮಾಡುವಂತಿಲ್ಲ. ನಿಮ್ಮ ಪ್ಲೇಟ್ ನಲ್ಲಿ ಎಷ್ಟು ತಿಂಡಿ ಇರಬೇಕು ಎನ್ನುವುದನ್ನು ಸರ್ಕಾರವೇ ನಿರ್ಧರಿಸುತ್ತದೆ.

 

ಹೀಗೊಂದು ಹೊಸ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಎಷ್ಟೋ ಜನ ಹೋಟೆಲ್ ಗೆ ಹೋಗಿ ಅಗತ್ಯಕ್ಕಿಂತ ಹೆಚ್ಚು ಆಹಾರ ಹಾಕಿಸಿಕೊಂಡು ಪೋಲು ಮಾಡುತ್ತಾರೆ. ಇನ್ನೊಂದೆಡೆ ಎಷ್ಟೋ ಜನ ಬಡವರು ಹೊಟ್ಟೆಗೆ ಹಿಟ್ಟಿಲ್ಲದೆ, ಬವಣೆ ಪಡುತ್ತಾರೆ.

 
ಸಮಾಜದ ಈ ಅಸಮಾನತೆ ನೀಗಿಸುವಂತಹ ವ್ಯವಸ್ಥೆಯೊಂದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ನಾಲ್ಕು ಪೀಸ್ ಕಬಾಬ್ ತಿನ್ನುವ ವ್ಯಕ್ತಿಗೆ ಎಂಟು ಪೀಸ್ ಕಬಾಬ್ ನೀಡುವ ಅಗತ್ಯವಿಲ್ಲ. ಇದು ವೇಸ್ಟ್ ಎನ್ನುತ್ತಾರೆ ಸಚಿವರು.

 
ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಆಹಾರ ಪೋಲಾಗುವ ಬಗ್ಗೆ ಮಾತನಾಡಿದ್ದರು. ಇದೀಗ ಕೇಂದ್ರ ಸಚಿವರು, ಇದನ್ನು ನಿಯಂತ್ರಿಸಲು ಕಾನೂನು ಏನಾದರೂ ತರಬಹುದೇ ಎಂದು ಕಾನೂನು ಸಚಿವಾಲಯದೊಂದಿಗೆ ಚಿಂತನೆ ನಡೆಸಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments