Select Your Language

Notifications

webdunia
webdunia
webdunia
webdunia

ಸರಕಾರ ರಚನೆ: ಪಳನಿಸ್ವಾಮಿಗೆ ಯಾವುದೇ ಭರವಸೆ ನೀಡದ ರಾಜ್ಯಪಾಲರು

ಸರಕಾರ ರಚನೆ: ಪಳನಿಸ್ವಾಮಿಗೆ ಯಾವುದೇ ಭರವಸೆ ನೀಡದ ರಾಜ್ಯಪಾಲರು
ಚೆನ್ನೈ , ಮಂಗಳವಾರ, 14 ಫೆಬ್ರವರಿ 2017 (18:16 IST)
ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಎಡಪ್ಪಾಡಿ ಪಳನಿಸ್ವಾಮಿ ಇಂದು ರಾಜ್ಯಪಾಲ ಸಿ.ವಿದ್ಯಾಸಾಗರ್ ರಾವ್ ಅವರನ್ನು ಭೇಟಿ ಮಾಡಿದ್ದರೂ ರಾಜ್ಯಪಾಲರು ಸರಕಾರ ರಚಿಸುವ ಕುರಿತಂತೆ ಯಾವುದೇ ಭರವಸೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ.
 
ಸರಕಾರ ರಚಿಸುವ ಹಕ್ಕು ಮಂಡಿಸಿದ ಪಳನಿ ಸ್ವಾಮಿ, ತಮಗೆ 112 ಶಾಸಕರ ಬೆಂಬಲವಿದೆ ಎಂದು ಶಾಸಕರ ಸಹಿ ಇರುವ ಪತ್ರಗಳನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.
 
ನಿಮ್ಮ ಪಕ್ಷದಲ್ಲಿ ಎರಡು ಬಣಗಳಾಗಿವೆಯೇ? ನೀವು ಕೂಡಾ ಸರಕಾರ ರಚಿಸಲು ಹಕ್ಕು ಮಂಡಿಸುತ್ತಿದ್ದೀರಿ,ಮತ್ತೊಂದೆಡೆ ಪನ್ನೀರ್ ಸೆಲ್ವಂ ಕೂಡಾ ಸರಕಾರ ರಚಿಸಲು ಹಕ್ಕು ಮಂಡಿಸುತ್ತಿದ್ದಾರೆ ಎಂದು ರಾಜ್ಯಪಾಲರು ಪಳನಿಸ್ವಾಮಿಯನ್ನು ಪ್ರಶ್ನಿಸಿದ್ದಾರೆ   
 
ಪಳನಿಸ್ವಾಮಿಯವರಿಂದ ಮಾಹಿತಿ ಪಡೆದ ಗವರ್ನರ್ ಸಿ.ವಿದ್ಯಾಸಾಗರ್ ರಾವ್, ಆದರೆ, ಯಾವುದೇ ಭರವಸೆ ನೀಡಲಿಲ್ಲ ಎಂದು ರಾಜಭವನದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸರಕಾರ ರಚಿಸಲು ಹಕ್ಕು ಮಂಡಿಸಿದ ಪಳನಿಸ್ವಾಮಿ