ಗೋವಾ ಆರೆಸ್ಸೆಸ್ ಅಧ್ಯಕ್ಷ ಸುಭಾಶ್ ವೆಲಿಂಗ್‌ಕರ್‌ ವಜಾಕ್ಕೆ ಗೋವಾ ಮುಖ್ಯಮಂತ್ರಿ ವಿಷಾದ

Webdunia
ಗುರುವಾರ, 1 ಸೆಪ್ಟಂಬರ್ 2016 (11:59 IST)
ಗೋವಾ ಆರ್‌ಎಸ್ಸೆಸ್ ಮುಖ್ಯಸ್ಥರಾಗಿದ್ದ ಸುಭಾಶ್ ವೆಲಿಂಗ್‌ಕರ್ ಅವರನ್ನು ಯಾವುದೇ ಸೌಜನ್ಯತೋರಿಸದೇ ವಜಾ ಮಾಡಿದ ಕ್ರಮದ ಬಗ್ಗೆ ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪಾರ್ಸೆಕರ್ ವಿಷಾದ ಸೂಚಿಸಿದ್ದಾರೆ.
 
ಇದಕ್ಕೆ ಮುಂಚೆ ಆರ್‌ಎಸ್ಸೆಸ್ ಪ್ರಚಾರ ಮುಖ್ಯಸ್ಥ ಮನಮೋಹನ್ ವೈದ್ಯ ನವದೆಹಲಿಯಲ್ಲಿ ವೆಲಿಂಗ್‌ಕರ್ ಅವರನ್ನು ಗೋವಾದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ವಿರೋಧಿಯಾಗಿ ಕೆಲಸ ಮಾಡಿದ್ದಕ್ಕಾಗಿ ವಜಾ ಮಾಡಲಾಗಿದೆ ಎಂದು ತಿಳಿಸಿದರು.
 
ಗೋವಾ ಸರ್ಕಾರದ ವಿರುದ್ಧ ಕಾರ್ಯನಿರ್ವಹಿಸಿ ರಾಜಕೀಯ ಸಂಘಟನೆ ರೂಪಿಸಿದ ಕಾರಣಕ್ಕಾಗಿ ವೆಲಿಂಗ್‌ಕರ್ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಆರ್‌ಎಸ್ಸೆಸ್ ತಿಳಿಸಿದೆ.
 
ಮಾಜಿ ಸ್ಪೀಕರ್ ಮತ್ತು ಪರಿಸರ ಹಾಗೂ ಅರಣ್ಯ ಸಚಿವ ರಾಜೇಂದ್ರ ಅರ್ಲೆಕರ್ , ವೆಲಿಂಗ್‌ಕರ್ ಅವರು ಗೋವಾದ ಬಿಜೆಪಿ ಮುಖಂಡರಿಗೆ ಗುರುವಾಗಿ ಮತ್ತು ಕಣ್ಮಣಿಯಾಗಿ ಇದ್ದರು ಎಂದು ಹೇಳಿದ್ದು, ಅವರಿಗೆ ನಿರಾಶೆಯಾಗಿದೆಯೇ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ.
 
ಪ್ರಾದೇಶಿಕ ಭಾಷೆಯ ಕ್ಷೇತ್ರಕ್ಕೆ ಮುಖ್ಯಸ್ಥರಾಗಿದ್ದ ವೆಲಿಂಗ್‌ಕರ್, ಪ್ರಾಥಮಿಕ ಶಾಲೆಗಳಲ್ಲಿ ರಾಜ್ಯಸರ್ಕಾರದ ಬೋಧನಾ ಮಾಧ್ಯಮದ ನೀತಿಯನ್ನು ಟೀಕಿಸುತ್ತಿದ್ದರು. ಕೊಂಕಣಿ ಮತ್ತು ಮರಾಠಿ ಮುಂತಾದ ಪ್ರಾದೇಶಿಕ ಭಾಷೆಗಳಿಗಿಂತ ಇದು ಇಂಗ್ಲಿಷ್ ಭಾಷೆಗೆ ಉತ್ತೇಜಿಸುತ್ತದೆಂದು ಟೀಕಿಸಿದ್ದರು. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ವಿಪರೀತ ಚಳಿ ನಡುವೆ ಈ ವಾರದ ಹವಾಮಾನ ವರದಿ ಗಮನಿಸಿ

ಸಿಡ್ನಿಯಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ಯುಕೆ ಪ್ರಧಾನಿ ಮೊದಲ ರಿಯಾಕ್ಷನ್

2 ವರ್ಷದ ಬಾಲಕಿ ರೇಪ್ ಎಸಗಿ, ಹತ್ಯೆ ಮಾಡಿದವನಿಗೆ ಕ್ಷಮದಾನಕ್ಕೆ ನಿರಾಕರಿಸಿದ ರಾಷ್ಟ್ರಪತಿ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮುಂದಿನ ಸುದ್ದಿ
Show comments