Webdunia - Bharat's app for daily news and videos

Install App

ಗೋವಾ ಅತ್ಯಾಚಾರ ಪ್ರಕರಣ: ಬಾಲಕಿಯನ್ನು 50 ಲಕ್ಷಕ್ಕೆ ಖರೀದಿಸಿದ್ದನಂತೆ ಶಾಸಕ

Webdunia
ಶುಕ್ರವಾರ, 6 ಮೇ 2016 (08:29 IST)
ತನ್ನನ್ನು ಮಲತಾಯಿಯಿಂದ 50 ಲಕ್ಷಕ್ಕೆ ಖರೀದಿಸಿಲಾಗಿತ್ತು ಎಂದು ಗೋವಾ ಶಾಸಕ ಆಚನಾಸಿಯೋ ಮಾನ್ಸೆರಾಟ್ಟೆಯಿಂದ ಅತ್ಯಾಚಾರಕ್ಕೀಡಾಗಿದ್ದಾಳೆ ಎನ್ನಲಾಗುತ್ತಿರುವ ಬಾಲಕಿ ಹೊಸ ಸತ್ಯವನ್ನು ಹೊರಹಾಕಿದ್ದಾಳೆ. 

ನ್ಯಾಯಾಲಯ ಸಮನ್ಸ್ ಕಳುಹಿಸಿದ ಬಳಿಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಗೋವಾದ ಮಾಜಿ ಶಿಕ್ಷಣ ಮಂತ್ರಿ ಆಚನಾಸಿಯೋ ಮಾನ್ಸೆರಾಟ್ಟೆ ನಿನ್ನೆ ಪೊಲೀಸರಿಗೆ ಶರಣಾಗಿದ್ದಾರೆ. 
 
ಕ್ರೈ ಬ್ರಾಂಚ್ ಪೊಲೀಸರಿಗೆ ಶರಣಾಗುವ ಮೊದಲು ಪಣಜಿಯ ಹೊರವಲಯದಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನಾನೇನು ತಪ್ಪು ಮಾಡಿಲ್ಲ. ಹೀಗಾಗಿ ನನಗೆ ಭಯವಾಗುತ್ತಿಲ್ಲ, ನನ್ನ ವಿರುದ್ಧ ಪಿತೂರಿ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ, ಕಾಂಗ್ರೆಸ್ ಶಾಸಕಿ ಜೆನಿಫರ್ ಅವರ ಜತೆಯಲ್ಲಿದ್ದರು.
 
ಕಳೆದ ಕೆಲ ದಿನಗಳ ಹಿಂದೆ ಶಾಸಕ ನೇಪಾಳದ ಅಪ್ರಾಪ್ತ ಬಾಲಕಿಯನ್ನು ಖರೀದಿಸಿ ಕರೆ ತಂದು ಮನೆಗೆಲಸದಳಾಗಿ ನೇಮಿಸಿಕೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅವರು ಪಾನೀಯಕ್ಕೆ ಮದ್ದನ್ನು ಬೆರೆಸಿ ಬಾಲಕಿಗೆ ಕುಡಿಸಿ ಜ್ಞಾನತಪ್ಪಿದ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ದೂರು ದಾಖಲಾಗಿದೆ.
 
ಬೆಳಿಗ್ಗೆ ಎಚ್ಚರವಾದಾಗ ಮೈಮೇಲೆ ಬಟ್ಟೆ ಇರಲಿಲ್ಲ. ಸುತ್ತಲೂ ರಕ್ತ ಚೆಲ್ಲಾಡಿತ್ತು. ಅವರು ಕೂಡ ಮೈಮೇಲೆ ಯಾವುದೇ ಬಟ್ಟೆಯಿಲ್ಲದೇ ನಗ್ನರಾಗಿದ್ದರು ಎಂದು ಬಾಲಕಿ ಮಕ್ಕಳ ರಕ್ಷಣಾ ಸಮಿತಿಗೆ ಹೇಳಿಕೆ ನೀಡಿದ್ದಾಳೆ.
 
ಮಾರ್ಚ್ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆಕೆಯ ಮೇಲೆ ಅತ್ಯಾಚಾರವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಾಸಕನ ವಿರುದ್ಧ ಐಪಿಸಿ ಸೆಕ್ಷನ್ 375ರ ಪ್ರಕಾರ ಎಫ್​ಐಆರ್ ದಾಖಲಾಗಿದೆ.
 
ಬಾಬುಷ್ ಮಗ ರೋಹಿತ್ ಕೂಡ 5 ವರ್ಷಗಳ ಹಿಂದೆ ಅಪ್ರಾಪ್ತ ಜರ್ಮನ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದ. ನಂತರ ದೋಷಮುಕ್ತನಾಗಿ ಬಿಡುಗಡೆಯಾಗಿದ್ದ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

ವಿಪಕ್ಷ ನಾಯಕನ ಬದಲಾವಣೆ: ಸತ್ಯಾಂಶವಿಲ್ಲ ಎಂದ ಬಿವೈ ವಿಜಯೇಂದ್ರ

ಗುಡ್ಡಕುಸಿತ: ಶಿರಾಡಿ ಘಾಟ್ ಬಂದ್, ಬೆಂಗಳೂರು– ಮಂಗಳೂರು ಸಂಪರ್ಕ ಕಡಿತ

ದ್ವಿಚಕ್ರ ವಾಹನಕ್ಕೆ ಟೋಲ್ ವದಂತಿ: ಸ್ಪಷ್ಟನೆ ಕೊಟ್ಟ ನಿತಿನ್ ಗಡ್ಕರಿ

ಮುಂದಿನ ಸುದ್ದಿ
Show comments