Webdunia - Bharat's app for daily news and videos

Install App

ಗಂಡಂದಿರಿಗೆ ಹೊಡೆಯಲು ನವ ವಧುವಿಗೆ ಮರದ ಬ್ಯಾಟ್ ಉಡುಗೊರೆ ಕೊಟ್ಟ ಸಚಿವ!

Webdunia
ಸೋಮವಾರ, 1 ಮೇ 2017 (08:36 IST)
ನವದೆಹಲಿ: ನಮ್ಮ ದೇಶದ ರಾಜಕಾರಣಿಗಳು ಎಗ್ಗಿಲ್ಲದೆ ಏನೇನೋ ಮಾತನಾಡಿ, ನಗೆಪಾಟಲಿಗೀಡಾಗುತ್ತಾರೆ. ಇನ್ನು ಕೆಲವೊಮ್ಮೆ ವೃಥಾ ವಿವಾದ ಸೃಷ್ಟಿಸುತ್ತಾರೆ. ಅಂತಹ ಕೆಲಸವನ್ನು ಮಧ್ಯಪ್ರದೇಶದ ಸಚಿವರೊಬ್ಬರು ಮಾಡಿದ್ದಾರೆ.

 
ಮಧ್ಯಪ್ರದೇಶದ ಪಂಚಾಯತ್ ರಾಜ್ ಸಚಿವ ಗೋಪಾಲ್ ಭಾರ್ಗವ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಹೊಸದಾಗಿ ವಿವಾಹ ಜೀವನಕ್ಕೆ ಕಾಲಿಟ್ಟ ವಧುವಿಗೆ ಅವರು ಖತರ್ನಾಕ್ ಐಡಿಯಾ ಕೊಟ್ಟಿದ್ದಾರೆ.

ಒಂದು ವೇಳೆ ನಿಮ್ಮ ಪತಿ ಕಿರುಕುಳ ನೀಡಿದರೆ, ಕುಡಿದು ಬಂದರೆ ಮರದ ಕೋಲು ತೆಗೆದು ಚೆನ್ನಾಗಿ ಏಟು ಕೊಡಿ ಎಂದು ಸಚಿವರು ಸಲಹೆ ಕೊಟ್ಟಿದ್ದಾರೆ.  ಅಲ್ಲದೆ ನೂತನ ವಧುವಿಗೆ ಮರದ ಬ್ಯಾಟ್ ಉಡುಗೊರೆ ನೀಡಿದ್ದಾರೆ. ಆ ಮೂಲಕ ಕುಡುಕ ಗಂಡಂದಿರಿಗೆ ಹೊಡೆಯಲು ಆಯುಧವನ್ನೂ ಅವರೇ ಗಿಫ್ಟ್ ಮಾಡಿದ್ದಾರೆ. ಇಂತಹದ್ದೊಂದು ಐಡಿಯಾ ಕೊಡುವುದಕ್ಕೆ ಕಾರಣ ಅವರ ಕ್ಷೇತ್ರದ ಮಹಿಳೆಯರು ಅವರಿಗೆ ಕೊಡುತ್ತಿದ್ದ ದೂರಂತೆ.

ಸದಾ ಮಹಿಳೆಯರು ತಮ್ಮ ಗಂಡ ಕುಡಿದು ಬಂದು ತಾನು ದುಡಿದ ಹಣವನ್ನೆಲ್ಲಾ ಕಿತ್ತುಕೊಳ್ಳುತ್ತಾನೆ ಎಂದು ದೂರು ಕೇಳಿ ಕೇಳಿ ಸಾಕಾಯಿತು. ಹೀಗಾಗಿ ಗಂಡ ಕಿರುಕುಳ ನೀಡಿದರೆ ನೀವೂ ಒಂದೆರಡು ಏಟು ಕೊಡಿ. ಪೊಲೀಸರೂ ನಿಮ್ಮನ್ನು ತಡೆಯಲ್ಲ ಎಂದು ಅಮೂಲ್ಯ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಕ್‌ಗೆ ಬೆಂಬಲ ಸೂಚಿಸಿದ ಟರ್ಕಿ: ಸೇಬು ಬೆನ್ನಲ್ಲೇ ಆಭರಣಕ್ಕೂ ಭಾರತದಲ್ಲಿ ಬಹಿಷ್ಕಾರ

India Pakistan: ಯಶಸ್ವಿಯಾಗಿ ಪಾಕ್‌ನ 600 ಡ್ರೋನ್‌ಗಳನ್ನು ಉರುಳಿಸಿದ ಭಾರತದ ವಾಯುಪಡೆ

ಉತ್ತರಪ್ರದೇಶ: ಕೂದಲು ಕಸಿ ಮಾಡಲು ಹೋಗಿ ಜೀವ ಕಳೆದುಕೊಂಡ ಇಬ್ಬರು ಎಂಜಿನಿಯರ್‌ಗಳು

ಲಿಂಗಸುಗೂರು: ಜಾಮೀನು ವಿಚಾರಕ್ಕೆ ವಿಷ ಕುಡಿಸಿ ವ್ಯಕ್ತಿಯ ಕೊಲೆ, 10ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಪ್ರೀತಿಸಿ ಮದುವೆಯಾದ ಹಿಂದೂ ಯುವಕ- ಮುಸ್ಲಿಂ ಯುವತಿ, ರಕ್ಷಣೆ ಕೋರಿದ ನವಜೋಡಿ

ಮುಂದಿನ ಸುದ್ದಿ
Show comments