Webdunia - Bharat's app for daily news and videos

Install App

ವಿಶ್ವದಲ್ಲಿ ಸಮುದ್ರ ಕಲುಷಿತಗೊಳಿಸುತ್ತಿರುವ ನದಿಗಳಲ್ಲಿ ಗಂಗಾನದಿಗೆ 2ನೇ ಸ್ಥಾನ

Webdunia
ಶನಿವಾರ, 10 ಜೂನ್ 2017 (11:19 IST)
ನವದೆಹಲಿ: ಹಿಂದೂಗಳ ಪವಿತ್ರ ನದಿ ಗಂಗೆ ತಾನು ಕಲುಷಿತಗೊಳ್ಳುತ್ತಿರುವುದಲ್ಲದೇ ಸಮುದ್ರವನ್ನು ಮಲಿನಗೊಳಿಸುತ್ತಿದೆ. ಹೀಗೆ ಸಮುದ್ರಗಳನ್ನುಕಲುಷಿತಗೊಳಿಸುತ್ತಿರುವ ನದಿಗಳಲ್ಲಿ ಭಾರತದ ಪವಿತ್ರ ಗಂಗಾ ನದಿ  ವಿಶ್ವದಲ್ಲೇ 2ನೇ ಸ್ಥಾನ ಪಡೆದುಕೊಂಡಿದೆ ಎಂಬ ಅಪಖ್ಯಾತಿಗೆ ಒಳಗಾಗಿದೆ.
 
ಪ್ರತೀ ವರ್ಷ ಗಂಗೆಯಲ್ಲಿ ಸುಮಾರು 115,000 ಟನ್ ಪ್ಲಾಸ್ಟಿಕ್ ಮ್ತತು ಕಲ್ಮಶ ಸೇರುತ್ತಿದೆ. ಅದೇ ಕಲ್ಮಶದೊಂದಿಗೆ ಸಮುದ್ರ ಸೇರಿ ಅದನ್ನೂ ಕೂಡ ಕಲುಷಿತಗೊಳಿಸುತ್ತಿದೆ ಎಂದು ಸಮುದ್ರ ಸ್ವಚ್ಛತಾ ಅಭಿಯಾನ  ನಡೆಸುತ್ತಿರುವ ಡಚ್ ಮೂಲದ ಸಂಸ್ಥೆಯೊಂದು ಹೇಳಿದೆ. ‘ದಿ ಓಷನ್‌ ಕ್ಲೀನಪ್‌' (ಸಮುದ್ರ ಸ್ವಚ್ಛತೆ) ಎಂಬ ನೆದರ್ಲೆಂಡ್‌ ಪ್ರತಿಷ್ಠಾನವು ನಡೆಸಿದ ಸಮೀಕ್ಷೆಯಲ್ಲಿ ಜಗತ್ತಿನ ನದಿಗಳು, ಸಮುದ್ರಕ್ಕೆ ಪ್ರತಿ ವರ್ಷ 1.15-2.41 ದಶಲಕ್ಷ ಟನ್‌ ಪ್ಲಾಸ್ಟಿಕ್‌ ತಂದು ಸೇರಿಸುತ್ತವೆ. ಇಷ್ಟೊಂದು ಪ್ಲಾಸ್ಟಿಕ್  ಅನ್ನು ಸಮುದ್ರದಿಂದ ತೆಗೆದು ಸ್ವಚ್ಛಗೊಳಿಸಲು 48 ಸಾವಿರದಿಂದ 1 ಲಕ್ಷ ಟ್ರಕ್‌ ಗಳು ಬೇಕಾಗಬಹುದು ಎಂದು ಹೇಳಿದೆ. 
 
ವರದಿಯ ಪ್ರಕಾರ ಅತಿ ಹೆಚ್ಚು ಮಾಲಿನ್ಯ ಸೃಷ್ಟಿಸುವ ನದಿ ಎನ್ನಿಸಿಕೊಂಡಿರುವುದು ಚೀನಾದ ಯಾಂಗ್‌ಟ್ಸೆ ನದಿ. ಇದು 3,33,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪೂರ್ವ ಚೀನಾ ಸಮುದ್ರಕ್ಕೆ ತಂದು ಸುರಿಯುತ್ತದೆ. ಬಳಿಕದ ಸ್ಥಾನ  ಭಾರತದ ಗಂಗಾ ನದಿಯದ್ದಾಗಿದ್ದು, ಗಂಗಾ ನದಿ ಪ್ರತೀ ವರ್ಷ ಬರೊಬ್ಬರಿ 1,15,000 ಟನ್‌ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಬಂಗಾಳಕೊಲ್ಲಿಗೆ ತಂದು ಸೇರಿಸುತ್ತಿದೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments