Webdunia - Bharat's app for daily news and videos

Install App

ಗಂಡಾದರೆ ಗಣೇಶ, ಹೆಣ್ಣಾದರೆ ಲಕ್ಷ್ಮಿ: ಕಾನೂನು ಬಾಹಿರ ಲಿಂಗ ನಿರ್ಧಾರಕ್ಕೆ ವೈದ್ಯರ ಕೋಡ್ ವರ್ಡ್

Webdunia
ಶುಕ್ರವಾರ, 17 ಜೂನ್ 2016 (15:26 IST)
ಒಂದು ಕಡೆ 'ಬೇಟಿ ಬಚಾವೋ ಬೇಟಿ ಪಡಾವೋ' ನಂತಹ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಕಳಪೆ ಸ್ಥಿತಿಯಲ್ಲಿರುವ ಗಂಡು-ಹೆಣ್ಣು ಅನುಪಾತವನ್ನು ಉತ್ತಮಪಡಿಸಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಅವರ ಈ ಕನಸಿಗೆ ತಣ್ಣೀರೆರಚುವಂತಹ ಚಟುವಟಿಕೆಗಳು ಅವ್ಯಾಹತವಾಗಿ ಸಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ಕಾನೂನು ಬಾಹಿರವಾಗಿ ಭ್ರೂಣ ಲಿಂಗ ಪತ್ತೆ ವ್ಯಾಪಕವಾಗಿ ನಡೆಯುತ್ತಿದೆ.  

ಇತ್ತೀಚಿಗೆ ಬಿಕಾನೇರ್‌ನ ಪೊಲೀಸರು ಆಗ್ರಾದಲ್ಲಿನ ಒಂದು ಅಲ್ಟ್ರಾಸೌಂಡ್ ಸೆಂಟರ್‌ಗೆ ದಾಳಿ ನಡೆಸಿದ್ದು, ಹಿರಿಯ ರೇಡಿಯೊಲಾಜಿಸ್ಟ್ ಡಾಕ್ಟರ್ ಅಮಿತ್ ಕುಮಾರ್ ಈ ಕೇಂದ್ರವನ್ನು ನಡೆಸುತ್ತಿದ್ದು ಅವರು ಲಿಂಗ ಪತ್ತೆ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇಲ್ಲಿ ದೂರದೂರದಿಂದ ಗರ್ಭಿಣಿಯರನ್ನು ಕರೆ ತಂದು ಲಿಂಗ ಪತ್ತೆ ಪರೀಕ್ಷೆಯನ್ನು ಮಾಡಿಸಲಾಗುತ್ತಿದ್ದು ಅದಕ್ಕೆ ಅಮಿತ್ ಕುಮಾರ್ ದುಬಾರಿ ಶುಲ್ಕವನ್ನು ಸಹ ವಿಧಿಸುತ್ತಾರೆ ಎಂದು ವಿಚಾರಣೆಯಿಂದ ತಿಳಿದು ಬಂದಿದೆ. 
 
ಭ್ರೂಣ ಹೆಣ್ಣಾದರೆ ಲಕ್ಷ್ಮಿ, ಗಂಡಾದರೆ ಗಣೇಶ ಎಂದು ವೈದ್ಯ ಅಮಿತ್ ಕುಮಾರ್ ಕೋಡ್ ವರ್ಡ್ ಬಳಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಏಜೆಂಟರು ಇಲ್ಲಿಗೆ ಗರ್ಭಿಣಿಯರನ್ನು ಕರೆತರುತ್ತಿದ್ದರು. ಅವರಿಗೆ ಸಿಗುವ ಕಮಿಷನ್ 7,000 ದಿಂದ 10,000 ಎಂಬ ಮಾಹಿತಿ ಲಭಿಸಿದೆ. ಕಮಿಷನ್ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಗುತ್ತಿತ್ತೆಂದರೆ ವೈದ್ಯ ಅಮಿತ್ ಕುಮಾರ್ ತನ್ನಲ್ಲಿಗೆ ಬರುವ ಗರ್ಭಿಣಿ ಮಹಿಳೆಯರ ಸಂಬಂಧಿಕರಿಂದ ಎಷ್ಟು ಹಣ ಸುಲಿಯುತ್ತಿರಬಹುದು ಎಂಬುದು ಪೊಲೀಸರಿಗೆನೆ ಶಾಕ್ ತಂದಿದೆ.
 
ವೈದ್ಯ ಅಮಿತ್ ಕುಮಾರ್ ಭ್ರೂಣ ಲಿಂಗ ಪತ್ತೆ ರಾಕೆಟ್‌ನಲ್ಲಿ ತೊಡಗಿಕೊಂಡಿರುವ ವಿಷಯ ತಿಳಿದು ಭಾರತೀಯ ಮೆಡಿಕಲ್ ಅಸೋಸಿಯೇಶನ್ (ಇಮಾ) ಆಘಾತ ಮತ್ತು ಕಳವಳ ವ್ಯಕ್ತಪಡಿಸಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ