Webdunia - Bharat's app for daily news and videos

Install App

20ರೂಪಾಯಿಗಾಗಿ ತಾಯಿಯನ್ನೇ ಕೊಂದ

Webdunia
ಶನಿವಾರ, 25 ಫೆಬ್ರವರಿ 2017 (12:40 IST)
20 ರೂಪಾಯಿ ನೀಡಲು ನಿರಾಕರಿಸಿದಳೆಂದು ಪಾಪಿಪುತ್ರನೊಬ್ಬ ತನ್ನ ಹೆತ್ತತಾಯಿಯನ್ನೇ ಹತ್ಯೆಗೈದ ಹೇಯ ಘಟನೆ ಮೊರಾದಾಬಾದ್‌ನಲ್ಲಿ ನಡೆದಿದೆ. 

ಆರೋಪಿ ಮಾದಕದ್ರವ್ಯಗಳ ವ್ಯಸನಿಯಾಗಿದ್ದು ಶುಕ್ರವಾರ ತನಗೆ 20 ರೂಪಾಯಿ ನೀಡೆಂದು ತಾಯಿಯನ್ನು ಕೇಳಿದ್ದಾನೆ. ಆದರೆ ನನ್ನ ಬಳಿ ಹಣವಿಲ್ಲ. ಜತೆಗೆ ನಿನ್ನ ಕೆಟ್ಟ ಚಟಕ್ಕೆ ನಾನು ಹಣ ನೀಡುವುದಿಲ್ಲವೆಂದು ತಾಯಿ ಹೇಳಿದ್ದು ಕೋಪಗೊಂಡ ಜಾವೇದ್ ತಾಯಿಯ ಹೊಟ್ಟೆಗೆ ಚಾಕು ಚುಚ್ಚಿ ಕೊಲೆಗೈದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
 
ಈ ಕುರಿತು ಮೃತಳ ಇನ್ನೊಬ್ಬ ಪುತ್ರ ಜಮ್ಶೇದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಯನ್ನೇ ಕೊಂದರೂ ಜಾವೇದ್ ಮುಖದಲ್ಲಿ ಸ್ವಲ್ಪವೂ ಪಶ್ಚಾತಾಪವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 
 
ಹಣಕ್ಕಾಗಿ ಜಾವೇದ್ ಸದಾ ತಾಯಿಯನ್ನು ಪೀಡಿಸುತ್ತಿದ್ದ. ಆತನೊಬ್ಬ ಜೂಜುಕೋರ ಹಾಗೂ ಡ್ರಗ್ಸ್‌ ವ್ಯಸನಿ ಎಂದು ವಿಚಾರಣೆ ವೇಳೆ ಜಮ್ಶೇದ್ ಪೊಲೀಸರಿಗೆ ತಿಳಿಸಿದ್ದಾನೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments