Select Your Language

Notifications

webdunia
webdunia
webdunia
webdunia

ಅತ್ಯಾಚಾರ ಮತ್ತು ಧರ್ಮಕ್ಕೆ ಸಂಬಂಧ ಕಲ್ಪಿಸಿದ ಗಡ್ಕರಿ: ಕಾಂಗ್ರೆಸ್ ಖಂಡನೆ

ಅತ್ಯಾಚಾರ ಮತ್ತು ಧರ್ಮಕ್ಕೆ ಸಂಬಂಧ ಕಲ್ಪಿಸಿದ ಗಡ್ಕರಿ: ಕಾಂಗ್ರೆಸ್ ಖಂಡನೆ
ಪಣಜಿ , ಶುಕ್ರವಾರ, 10 ಏಪ್ರಿಲ್ 2015 (15:30 IST)
ಅತ್ಯಾಚಾರ ಮತ್ತು ಧರ್ಮಕ್ಕೂ ನಿಕಟ ಸಂಬಂಧ ಕಲ್ಪಿಸಿ ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಸಚಿವ ಗಡ್ಕರಿ ವಿರುದ್ಧ ಕಾಂಗ್ರೆಸ್ ಟೀಕಾಸ್ತ್ರ ಪ್ರಯೋಗಿಸಿದೆ.

ಕಳೆದ ತಿಂಗಳು ಪಶ್ಚಿಮ ಬಂಗಾಲದಲ್ಲಿ ನಡೆದ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಾಗಿರುವ ಇಬ್ಬರು ಬಾಂಗ್ಲಾ ಪ್ರಜೆಗಳನ್ನು ಕುರಿತು ಗಡ್ಕರಿ ಕಾಮೆಂಟ್ ಮಾಡಿದ್ದರು. 
 
ಕೆಲ ದಿನಗಳ ಹಿಂದೆ  ಕೋಲಕತ್ತಾದಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶಿ ಮುಸ್ಲಿಮ್ ಯುವಕರು ಇದ್ದಾರೆ ಎಂದು ನಿತಿನ್ ಗಡ್ಕರಿ ಹೇಳಿದ್ದರು. 
 
ಅವರ ಈ ಹೇಳಿಕೆಯನ್ನು ಖಂಡಿಸಿರುವ ಗೋವಾ ಕಾಂಗ್ರೆಸ್ ಕಾರ್ಯದರ್ಶಿ ದುರ್ಗಾದಾಸ್ ಕಾಮತ್, "ಅತ್ಯಾಚಾರ ಮತ್ತು ಧರ್ಮಕ್ಕೆ ಸಂಪರ್ಕ ಕಲ್ಪಿಸಿಲಾಗದು. ರೋಗಗ್ರಸ್ಥ ಮನಸ್ಸಿನವರು ಅತ್ಯಾಚಾರವನ್ನೆಸಗುತ್ತಾರೆ. ನಾವು ಅಪರಾಧಿಗೆ ಶಿಕ್ಷೆ ನೀಡಬೇಕು. ಅದನ್ನು ಬಿಟ್ಟು ಈ ಅಪರಾಧಕ್ಕೂಧರ್ಮಕ್ಕೂ ನಡುವೆ ಸಂಪರ್ಕ ಕಲ್ಪಿಸುವುದಲ್ಲ", ಎಂದು ಗುಡುಗಿದ್ದಾರೆ. 

Share this Story:

Follow Webdunia kannada