ಬುಧವಾರ ನಗರದಲ್ಲಿ ನಡೆದ ವಿಹೆಚ್ಪಿ ನಾಯಕನ ಕೊಲೆಯಿಂದ ಆಕ್ರೋಶಗೊಂಡ ಗುಂಪೊಂದು ಪೊಲೀಸ್ ಇನ್ಸಪೆಕ್ಟರ್ ಒಬ್ಬರನ್ನು ಹಿಡಿದು ಥಳಿಸಿದೆ.
ಸ್ಥಳೀಯ ವಿಹೆಚ್ಪಿ ನಾಯಕ ಅರುಣ್ ಮಹೌರ್ ಅಲಿಯಾಸ್ ಬಬ್ಲಿಯನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದ ಬಳಿಕ ನಗರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು, ಉದ್ವಿಘ್ನ ಜನರು ಪೊಲೀಸ್ ಅಧಿಕಾರಿಯನ್ನು ಹಿಡಿದು ಥಳಿಸಿದ್ದಾರೆ.
ಪ್ರತಿಭಟನಾ ನಿರತ ಗುಂಪಿನ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ ಬಳಿಕ ಪರಿಸ್ಥಿತಿ ಹೆಚ್ಚು ಗಂಭೀರವಾಯಿತು. ಅಧಿಕಾರಿಯನ್ನು ಥಳಿಸಿದ ಗುಂಪು ಎಮ್ಜಿ ರಸ್ತೆಯನ್ನು ಬ್ಲಾಕ್ ಮಾಡಿತು. ವಾಹನಗಳನ್ನು ನಾಶ ಪಡಿಸಲಾಯಿತು. ಹೀಗಾಗಿ ಮಂತೋಲಾದ ಎಮ್ಜಿ ರಸ್ತೆ ಮತ್ತು ವೈದ್ಯಕೀಯ ಕಾಲೇಜು ಬಳಿ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಯಿತು.
ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಪೊಲೀಸರು ಶತ ಪ್ರಯತ್ನ ಮಾಡುತ್ತಿದ್ದಾರೆ.