Webdunia - Bharat's app for daily news and videos

Install App

ಹೊಸ ಬದುಕು ಪ್ರಾರಂಭಿಸ ಬಯಸಿರುವ ಭಾರತ ಮೂಲದ ಭಯೋತ್ಪಾದಕರು

Webdunia
ಬುಧವಾರ, 26 ನವೆಂಬರ್ 2014 (12:53 IST)
ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ಸ್ ಸೇರಿಕೊಂಡಿರುವ ಮುಂಬೈ ಸಮೀಪದ ಕಲ್ಯಾಣ್ ಮೂಲದ ನಾಲ್ವರು ಭಾರತೀಯ ಯುವಕರು ಮನೆಗೆ ಮರಳಲು ಬಯಸಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

i
ಬುಧವಾರ ಪ್ರಕಟವಾಗಿರುವ ಮಾಧ್ಯಮಗಳ ವರದಿಯ ಪ್ರಕಾರ,  ಮನೆ ತೊರೆದು ಹೋಗಿ ಉಗ್ರ ಸಂಘಟನೆಯ ಸದಸ್ಯರಾಗಿ ಗುರುತಿಸಿಕೊಂಡಿರುವ ನಾಲ್ಕು ಜನ ಯುವಕರ ಕುಟುಂಬದ ಸದಸ್ಯರು ಸರ್ಕಾರವನ್ನು ಸಂಪರ್ಕಿಸಿ ತಮ್ಮ ಮಕ್ಕಳಿಗೆ ತಪ್ಪಿನ ಅರಿವಾಗಿದೆ. ಅವರು ಭಯೋತ್ಪಾದಕ ಸಂಘಟನೆಯನ್ನು ತ್ಯಜಿಸಿ ದೇಶಕ್ಕೆ ಮರಳಿ ಹೊಸ ಬದುಕು ಪ್ರಾರಂಭಿಸುವ ಮನೋಭಿಲಾಷೆ ಹೊಂದಿದ್ದಾರೆ ಎಂದು ಹೇಳಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಮಾಹಿತಿ ನೀಡಿವೆ. 
 
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರಲ್ಲೊಬ್ಬ ಯುವಕನೊಬ್ಬನ ತಂದೆ "ನನ್ನ ಮಗ ಹಿಂತಿರುಗ ಬಯಸುತ್ತಿದ್ದಾನೆ. ಆದರೆ ಅದಕ್ಕೆ ಸರಕಾರದ ಸಹಾಯ ಹಸ್ತ ಅತ್ಯವಶ್ಯ " ಎಂದು ಹೇಳಿದ್ದಾರೆ.
 
ಇವರನ್ನು ಹೊರತು ಪಡಿಸಿ ಇರಾಕ್‌ನಲ್ಲಿ ಇದೇ ಭಯೋತ್ಪಾದಕ ಸಂಘಟನೆಗಾಗಿ ಧರ್ಮಯುದ್ಧದಲ್ಲಿ ತೊಡಗಿಸಿಕೊಂಡಿರುವ ಮತ್ತೆ ಮೂವರು ಯುವಕರು ಸಹ ದೇಶಕ್ಕೆ ಮರಳ ಬಯಸುತ್ತಿದ್ದಾರೆ ಎಂಬ ಮಾಹಿತಿ ಸರಕಾರದ ಬಳಿ ಇದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments